Home ಮೀಡಿಯಾ ನರೇಂದ್ರ ಮೋದಿ ವಾಸ್ತವ್ಯದ ಹೋಟೆಲ್ ಬಿಲ್ ಪಾವತಿ ಬಾಕಿ ವಿವಾದ ; ಸ್ಪಷ್ಟನೆ ನೀಡಿದ ಸಚಿವ...

ನರೇಂದ್ರ ಮೋದಿ ವಾಸ್ತವ್ಯದ ಹೋಟೆಲ್ ಬಿಲ್ ಪಾವತಿ ಬಾಕಿ ವಿವಾದ ; ಸ್ಪಷ್ಟನೆ ನೀಡಿದ ಸಚಿವ ಈಶ್ವರ್ ಖಂಡ್ರೆ

0

2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದ ಸಂದರ್ಭದಲ್ಲಿ ಬಾಕಿ ಉಳಿಸಿಕೊಂಡಿದ್ದ ₹80 ಲಕ್ಷ ಹೋಟೆಲ್ ಬಿಲ್ ಪಾವತಿ ರಾಜ್ಯ ಸರ್ಕಾರದ ಹೊಣೆ. ಅದನ್ನು ಕರ್ನಾಟಕ ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಸೋಮವಾರ ಹೇಳಿದ್ದಾರೆ.

ಪ್ರಾಜೆಕ್ಟ್ ಟೈಗರ್‌ನ 50 ವರ್ಷಗಳ ಸ್ಮರಣಾರ್ಥ ಕಳೆದ ವರ್ಷ ಏಪ್ರಿಲ್‌ನಲ್ಲಿ ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತವರ ತಂಡದ ಒಟ್ಟಾರೆ ವಾಸ್ತವ್ಯದ ಬಿಲ್ ₹80 ಲಕ್ಷ ದಾಟಿದ ಬಗ್ಗೆ ಇತ್ತೀಚೆಗೆ ದೊಡ್ಡ ಸುದ್ಧಿಯಾಗಿತ್ತು. ಬಾಕಿ ಬಿಲ್ ಪಾವತಿ ಯಾರ ಹೊಣೆ ಎಂಬ ಬಗ್ಗೆಯೂ ಗಂಭೀರ ಚರ್ಚೆ ಏರ್ಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಮಂತ್ರಿ, ರಾಷ್ಟ್ರಪತಿಗಳಂತಹ ಗಣ್ಯರು ಬಂದಾಗ ಅವರಿಗೆ ಆತಿಥ್ಯ ನೀಡುವುದು ರಾಜ್ಯ ಸರ್ಕಾರದ ಸಂಪ್ರದಾಯ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಕಳೆದ ವರ್ಷ ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಕಾರಣ, ಮಾದರಿ ನೀತಿ ಸಂಹಿತೆ (MCC) ಜಾರಿಯಲ್ಲಿರುವಾಗಿನಿಂದ ಅಂದಾನ ರಾಜ್ಯ ಸರ್ಕಾರವು ಕಾರ್ಯಕ್ರಮದ (ಪ್ರಾಜೆಕ್ಟ್ ಟೈಗರ್) ಯೋಜನೆಯಲ್ಲಿ ತೊಡಗಿಸಿಕೊಂಡಿರಲಿಲ್ಲ.

ಪ್ರಾಜೆಕ್ಟ್ ಟೈಗರ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರು-ಬಂಡಿಪುರಕ್ಕೆ ಪ್ರಧಾನಿ ಭೇಟಿ ನೀಡಿದ್ದರು. ಆ ಸಮಯದಲ್ಲಿ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ತಕ್ಷಣವೇ ಚುನಾವಣೆ ಘೋಷಣೆಯಾಯಿತು. ಹಾಗಾಗಿ ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿತ್ತು. ಆರಂಭದಲ್ಲಿ ಸುಮಾರು ₹3 ಕೋಟಿ ಖರ್ಚು ಮಾಡಲು ಯೋಜಿಸಿದ್ದರು. ಆದರೆ ಖರ್ಚು ₹ 6.33 ಕೋಟಿ ಆಗಿತ್ತು. ಹಾಗಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ  ಇನ್ನೂ ₹3.3 ಕೋಟಿ ಬಾಕಿ ಬರಬೇಕಿದೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.

ಪ್ರಧಾನಿ ತಂಗಿದ್ದ ಹೋಟೆಲ್ ತನ್ನ ಬಾಕಿ ವಸೂಲಿಗಾಗಿ ಕಾನೂನು ಮಾರ್ಗ ಹಿಡಿಯುವ ದಾರಿಯಲ್ಲಿ ಮುಂದುವರಿಯುವ ಬಗ್ಗೆ ಮಾಧ್ಯಮ ವರದಿಗಳ ನಂತರ, ಈಶ್ವರ್ ಖಂಡ್ರೆ ಶನಿವಾರ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.

You cannot copy content of this page

Exit mobile version