ಶನಿವಾರದಿಂದ ಭಾನುವಾರದ ಅಂತ್ಯದ ವರಗೆ ಕೇವಲ 24 ಗಂಟೆಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ವರದಿಯಾದ ಅಪಘಾತ ಪ್ರಕರಣಗಳಲ್ಲಿ ಅತಿ ಹೆಚ್ಚು ಅಪಘಾತ ದುರ್ಮರಣ ಸಂಭವಿಸಿದೆ. ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಇದು ದೈನಂದಿನ ಅಪಘಾತ ಪ್ರಕರಣಕ್ಕೆ ಎರಡು ಪಟ್ಟು ಹೆಚ್ಚು ಸಾವು ನೋವುಗಳು ದಾಖಲಾಗಿದೆ.
ಬೆಂಗಳೂರಿನ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಮತ್ತು ಕಮಿಷನರ್ ಅಲೋಕ್ ಕುಮಾರ್ ಮಾತನಾಡಿ, ಹೆಚ್ಚಿನ ಸಾವುಗಳು ಅಜಾಗರೂಕ ಚಾಲನೆಯಿಂದ ಸಂಭವಿಸಿವೆ. ಪೊಲೀಸ್ ದಾಖಲೆಗಳ ಪ್ರಕಾರ ತುಮಕೂರು ಜಿಲ್ಲೆ ಏಳು ಸಾವುಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಹಾಸನ (6), ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ (ತಲಾ 4), ಮತ್ತು ಕಾರವಾರ (3) ನಂತರದ ಸ್ಥಾನದಲ್ಲಿದೆ.
ಸಾಮಾನ್ಯ ದಿನದಲ್ಲಿ, ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ 30 ರಿಂದ 35 ರ ನಡುವೆ ಇರುತ್ತದೆ ಎಂದು ಇನ್ನೊಬ್ಬ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಎಂಟು ಪಾದಚಾರಿಗಳ ಸಾವು ವರದಿಯಾದ ಬಗ್ಗೆ ಪೊಲೀಸ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
“ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳನ್ನು ದಾಟುವಾಗ ರಾತ್ರಿಯಲ್ಲಿ ಪಾದಚಾರಿ ಸಾವುಗಳು ವರದಿಯಾಗಿವೆ. ಚಾಲಕರು ಆ ಜನರು ಹತ್ತಿರದಿಂದ ದಾಟುವುದನ್ನು ನೋಡಿದ್ದಾರೆ ಮತ್ತು ವಾಹನಗಳನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಹಾಸನ ಜಿಲ್ಲೆಯಲ್ಲಿ ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಟುಂಬವು ಕಾರವಾರದಿಂದ ಹಿಂತಿರುಗುತ್ತಿತ್ತು, ಅವರು ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದರು. ಕಾರು ಚಾಲಕ ನಿದ್ರಿಸಿದ್ದರಿಂದ ಅಪಘಾತ ಸಂಭವಿಸಿದೆ.
ಮೃತಪಟ್ಟ 51 ಮಂದಿಯಲ್ಲಿ 30 ಮಂದಿ ದ್ವಿಚಕ್ರ ವಾಹನ ಸವಾರರು ಎಂದು ವರದಿಯಾಗಿದೆ.