Home ದೇಶ ತ್ರಿಪುರಾ: ಬಾಂಗ್ಲಾದೇಶೀಯರಿಗೆ ಸೇವೆ ನೀಡದಿರಲು ನಿರ್ಧರಿಸಿದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಂಘ

ತ್ರಿಪುರಾ: ಬಾಂಗ್ಲಾದೇಶೀಯರಿಗೆ ಸೇವೆ ನೀಡದಿರಲು ನಿರ್ಧರಿಸಿದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಂಘ

0

ಅಗರ್ತಲಾ, ಡಿಸೆಂಬರ್ 3: ಬಾಂಗ್ಲಾದೇಶದಲ್ಲಿ ಭಾರತೀಯ ಧ್ವಜಕ್ಕೆ ಆಗಿರುವ ಅವಮಾನವನ್ನು ಗಮನದಲ್ಲಿಟ್ಟುಕೊಂಡು, ‘ಆಲ್ ತ್ರಿಪುರಾ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘ (ATHROA)’ ಬಾಂಗ್ಲಾದೇಶಿ ಪ್ರವಾಸಿಗರಿಗೆ ತನ್ನ ಸೇವೆಗಳನ್ನು ಒದಗಿಸದಿರಲು ನಿರ್ಧರಿಸಿದೆ.

ಸಂಘವು ಈ ಮಾಹಿತಿಯನ್ನು ನೀಡಿದೆ.

ಸೋಮವಾರ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ATHROA ಪ್ರಧಾನ ಕಾರ್ಯದರ್ಶಿ ಸೈಕತ್ ಬಂಡೋಪಾಧ್ಯಾಯ ತಿಳಿಸಿದ್ದಾರೆ.

ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ ಎಂದರು. ನಮ್ಮ ರಾಷ್ಟ್ರಧ್ವಜವನ್ನು ಅವಮಾನಿಸಲಾಗಿದೆ ಮತ್ತು ಬಾಂಗ್ಲಾದೇಶದ ಮೂಲಭೂತವಾದಿಗಳ ಒಂದು ವಿಭಾಗವು ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿದೆ. ಇಂತಹ ಘಟನೆಗಳು ಹಿಂದೆಯೂ ನಡೆಯುತ್ತಿದ್ದವು, ಆದರೆ ಈಗ ಎಲ್ಲ ಮಿತಿಗಳನ್ನು ದಾಟಿದೆ.

“ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿ ನಿಜವಾಗಿಯೂ ಚಿಂತಾಜನಕವಾಗಿದೆ” ಎಂದು ಬಂಡೋಪಾಧ್ಯಾಯ ಹೇಳಿದರು.

“ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ನಾವು ಖಂಡಿಸುತ್ತೇವೆ” ಎಂದು ಅವರು ಹೇಳಿದರು.

ಈ ಹಿಂದೆ, ನೆರೆಯ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಖಾಸಗಿ ಆಸ್ಪತ್ರೆ ‘ಐಎಲ್‌ಎಸ್ ಆಸ್ಪತ್ರೆ’ ಬಾಂಗ್ಲಾದೇಶದ ಯಾವುದೇ ರೋಗಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಘೋಷಿಸಿತ್ತು.

You cannot copy content of this page

Exit mobile version