ಗುಜರಾತ್ : ಕಟ್ಟಡ ಕುಸಿದು ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ಈ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಮೇಯರ್ ಕೆ.ಜೆ. ಪರ್ಮಾರ್ ಮಾದ್ಯಮಗಳೊಂದಿಗೆ ಮಾತನಾಡಿ, ಯಾರಾದರೂ ತಪ್ಪು ಕಟ್ಟಡ ಯೋಜನೆಗಳನ್ನು ಜಾರಿಗೊಳಿಸಿದರೆ ನಾವು ಪರಿಶೀಲಿಸುತ್ತೇವೆ ಮತ್ತು ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ʼಇದು ಖಾಸಗಿ ಡೆವಲಪರ್ ಹೊಂದಿರುವ ಖಾಸಗಿ ಕಟ್ಟಡವಾಗಿದೆ. ಕಟ್ಟದ ಕುಸಿದಾಗ ಸ್ಥಳದಲ್ಲೇ 7 ಜನ ದುರ್ಮರಣ ಹೊಂದಿದ್ದಾರೆ. ಘಟನೆ ಬೆಳಗ್ಗೆ 7.30ಕ್ಕೆ ನಡೆದಿದ್ದರೂ ಬಿಲ್ಡರ್ ಅದನ್ನು ಮರೆಮಾಚಿ 11 ಗಂಟೆಯ ನಂತರ ಪೊಲೀಸರಿಗೆ ತಿಳಿಸಿದ್ದಾರೆʼ ಎಂದು ಪರ್ಮಾರ್ ರವರು ಹೇಳಿದರು. ಕಟ್ಟಡಕ್ಕೆ ಸಂಬಂಧಿಸಿದ ಹಾಗೆ ಮುನ್ಸಿಪಲ್ ಕಾರ್ಪೊರೇಶನ್ನ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದರೆ ಅದರ ಬಗ್ಗೆ ಗಮನ ಹರಿಸುತ್ತೇವೆ, ಯಾರಾದರೂ ಅಕ್ರಮವಾಗಿ ಕಟ್ಟಡ ಯೋಜನೆಗಳನ್ನು ಜಾರಿಗೊಳಿಸಿದರೆ ನಾವು ಅವುಗಳನ್ನು ಪರಿಶೀಲಿಸಿ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಮೇಯರ್ ಕೆಜೆ ಪರ್ಮಾರ್ ಮಾಹಿತಿ ನೀಡಿದ್ದಾರೆ.