ಬೆಂಗಳೂರು: ಬಿಜೆಪಿ ಕಾರ್ಯಕರ್ತೆಯಾಗಿದ್ದ 70 ವರ್ಷದ ಮಹಿಳೆ ಕೊಲೆ ಪ್ರಕರಣವನ್ನು ಕರ್ನಾಟಕ ಪೊಲೀಸರು ಸೋಮವಾರ ಭೇದಿಸಿದ್ದು, ಆರೋಪಿಯನ್ನು ಬೆಂಗಳೂರಿನಿಂದ ಬಂಧಿಸಿದ್ದಾರೆ.
ಆರೋಪಿಯೂ ಬಿಜೆಪಿ ಕಾರ್ಯಕರ್ತನಾಗಿದ್ದು, ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದ ನಂತರ, ಶವವನ್ನು ತುಂಡುಗಳಾಗಿ ಕತ್ತರಿಸಿ ದೇಹವನ್ನು ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ತುಂಬಿಟ್ಟಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಬೆಂಗಳೂರಿನ ಕೆ.ಆರ್. ಪುರಂನ ದಿನೇಶ್ ಎಂದು ಗುರುತಿಸಲಾಗಿದ್ದು, ಈತ ಮೊದಲು ಚೆನ್ನೈ ಬಂದರಿನಲ್ಲಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ. ವೃದ್ಧೆಯ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಕೆ.ಆರ್. ಪುರಂ ನಗರದ ನಿಸರ್ಗ ಲೇಔಟ್ನಲ್ಲಿರುವ ಪಾಳುಬಿದ್ದ ಮನೆಯ ಸಮೀಪ ಪ್ಲಾಸ್ಟಿಕ್ ಡ್ರಮ್ನಲ್ಲಿ ಸಂತ್ರಸ್ತೆ ಸುಶೀಲಮ್ಮ ಅವರ ಶವ ಪತ್ತೆಯಾಗಿದೆ. ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿತ್ತಾದರೂ, ದೇಹದ ಕಾಲುಗಳು ಮತ್ತು ಕೈಗಳು ಕಾಣೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶ್ವಾನದಳವು ಪೊಲೀಸ್ ತಂಡವನ್ನು ಸಂತ್ರಸ್ತೆಯ ಮನೆಗೆ ಸಮೀಪವಿರುವ ಅದೇ ಪ್ರದೇಶಗಳಲ್ಲಿರುವ ಆರೋಪಿಯ ಮೆನಗೆ ಕರೆದೊಯ್ಯಿತು.
ಆರೋಪಿಯು 30 ಲಕ್ಷ ರೂಪಾಯಿ ಸಾಲ ಹೊಂದಿದ್ದು, ಸಾಲ ಕೊಟ್ಟವರು ಮನೆಗೆ ಬರಲು ಆರಂಭಿಸಿದ್ದು, ಹಣ ಪಾವತಿಸದ ಕಾರಣಕ್ಕೆ ಎಳೆದೊಯ್ದಿದ್ದಾರೆ. ಸಂತ್ರಸ್ತೆ ಸುಶೀಲಮ್ಮ ಮನೆ ಹೊಂದಿದ್ದು, ಆಸ್ತಿ ವಿಲೇವಾರಿ ಮಾಡಿ ಅಪಾರ ಪ್ರಮಾಣದ ಹಣ ಪಡೆದಿರುವುದು ಆರೋಪಿಗೆ ತಿಳಿದಿತ್ತು.
ಆರೋಪಿಯು ಕೊಲೆಗೆ ಯೋಜನೆ ರೂಪಿಸಿ ವೃದ್ಧೆಯನ್ನು ಮನೆಗೆ ಕರೆಸಿಕೊಂಡಿದ್ದ. ಅಲ್ಲಿ ಅವನು ಅವರನ್ನು ಕತ್ತು ಹಿಸುಕಿ ಕೊಂದು ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದ. ನಂತರ ಕೈಕಾಲುಗಳನ್ನು ಆವಲಹಳ್ಳಿ ಕೆರೆಯಲ್ಲಿ ವಿಲೇವಾರಿ ಮಾಡಿ ದೇಹದ ಇತರ ಭಾಗಗಳನ್ನು ವಿಲೇವಾರಿ ಮಾಡಲು ಮುಂದಾಗಿದ್ದ.
ಸ್ಥಳೀಯರು ಪ್ಲಾಸ್ಟಿಕ್ ಡ್ರಮ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಸುಶೀಲಮ್ಮ ಅವರು ನಿಸರ್ಗ ಲೇಔಟ್ನ ಎರಡನೇ ಮುಖ್ಯರಸ್ತೆಯಲ್ಲಿರುವ ಫ್ಲ್ಯಾಟ್ನಲ್ಲಿ ವಾಸವಾಗಿದ್ದರು. ಆಕೆಯ ಕಿರಿಯ ಮಗಳು ಮತ್ತು ಮೊಮ್ಮಗಳು ಅವರ ಫ್ಲಾಟ್ನಿಂದ ಸುಮಾರು 200 ಅಡಿ ದೂರದಲ್ಲಿರುವ ಮತ್ತೊಂದು ಅಪಾರ್ಟ್ಮೆಂಟ್ನಲ್ಲಿ ತಂಗಿದ್ದರು. ಸಂತ್ರಸ್ತೆ ಆಗಾಗ ಒಂದು ಅಥವಾ ಎರಡು ದಿನಗಳ ಕಾಲ ದೇವಸ್ಥಾನಗಳಿಗೆ ಭೇಟಿ ನೀಡಲು ಹೋಗುತ್ತಿದ್ದರಿಂದ ಕುಟುಂಬವು ದುರಂತದ ಕುರಿತು ಯೋಚಿಸಿರಲಿಲ್ಲ.
ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.