ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮೇಲೆ ಹೊರಿಸಲಾಗಿದ್ದ ಕರೆಂಟ್ ಕಳ್ಳತನದ ಆರೋಪ ಒಂದು ಲಾಜಿಕಲ್ ಆದ ಹಂತ ತಲುಪಿದ್ದು, ಅವರು ತಮಗೆ ವಿಧಿಸಲಾದ ದಂಡವನ್ನು ಕಟ್ಟುವ ಮೂಲಕ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ.
ಈ ಪ್ರಕರಣದಿಂದ ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯ ವಲಯದಲ್ಲಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದ ಕುಮಾರ ಸ್ವಾಮಿ ತಮ್ಮ ಮನೆಗೆ ಲೈಟಿಂಗ್ ಕನೆಕ್ಷನ್ ಕೊಡಲು ಬಂದ ಹುಡುಗರಿಂದ ತಪ್ಪಾಗಿದೆ ಎಂದು ಸಮಜಾಯಿಷಿ ಕೊಟ್ಟಿದ್ದರು.
ಈ ನಿಟ್ಟಿನಲ್ಲಿ ಬೆಸ್ಕಾಮ್ ಕುಮಾರಸ್ವಾಮಿಯವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿತ್ತು. ಈಗ ಕುಮಾರಸ್ವಾಮಿ ದಂಡ ಕಟ್ಟುವುದರೊಂದಿಗೆ ಈ ಪ್ರಕರಣದಿಂದ ಹೊರಬಂದಿದ್ದಾರೆ.
HDK ದಂಡದ ಮೊತ್ತವಾಗಿ 68,526 ರೂಪಾಯಿಗಳನ್ನು ಕಟ್ಟಿದ್ದಾರೆಂದು ಸುದ್ದಿ ಸಂಸ್ಥೆ PTI ವರದಿ ಮಾಡಿದೆ.