Home ಬೆಂಗಳೂರು ಸಚಿವ ಸಂಪುಟದಲ್ಲಿ ಬಾರಿ ಬದಲಾವಣೆ ; ಸಿದ್ದು ಸಂಪುಟದ 12 ಸಚಿವರಿಗೆ ಕೈತಪ್ಪಿದ ಸಚಿವ ಸ್ಥಾನ

ಸಚಿವ ಸಂಪುಟದಲ್ಲಿ ಬಾರಿ ಬದಲಾವಣೆ ; ಸಿದ್ದು ಸಂಪುಟದ 12 ಸಚಿವರಿಗೆ ಕೈತಪ್ಪಿದ ಸಚಿವ ಸ್ಥಾನ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಹಲವು ಹಿರಿಯ ನಾಯಕರನ್ನು ಕೈಬಿಡಲಾಗಿದೆ.

ಸಿದ್ದರಾಮಯ್ಯ ಸಂಪುಟದ ಒಟ್ಟು 12 ನಾಯಕರನ್ನು ಸಂಪುಟದಿಂದ ಕೈಬಿಡಲಾಗಿದ್ದು, ಸಚಿವ ಸ್ಥಾನ ಕಳೆದುಕೊಂಡವರ ಪಟ್ಟಿಯಲ್ಲಿ ಹಿರಿಯ ನಾಯಕರು ಹಾಗೂ ಹಲವು ಪ್ರಭಾವಿ ಸಚಿವರು ಸೇರಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಂಪುಟ ಪುನಾರಚನೆಯ ಮೂಲಕ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ ಹಾಗೂ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

  • ಡಾ. ಹೆಚ್.ಸಿ. ಮಹದೇವಪ್ಪ
  • ಕೆ.ಎನ್. ರಾಜಣ್ಣ
  • ಶಿವಾನಂದ ಪಾಟೀಲ್
  • ಕೆ. ವೆಂಕಟೇಶ್
  • ಡಾ. ಎಂ.ಸಿ. ಸುಧಾಕರ್
  • ಶರಣಬಸಪ್ಪ ದರ್ಶನಾಪುರ
  • ಆರ್.ಬಿ. ತಿಮ್ಮಾಪುರ
  • ರಹೀಮ್ ಖಾನ್
  • ಡಿ. ಸುಧಾಕರ್
  • ಎನ್.ಎಸ್. ಭೋಸರಾಜು
  • ಲಕ್ಷ್ಮಿ ಹೆಬ್ಬಾಳ್ಕರ್
  • ಬೈರತಿ ಸುರೇಶ್

ಸಚಿವ ಸ್ಥಾನದಿಂದ ವಂಚಿತರಾಗಿದ್ದು, ಈ ಬೆಳವಣಿಗೆಯಿಂದ ಕಾಂಗ್ರೆಸ್‌ ಪಾಳಯದಲ್ಲಿ ಅಸಮಾಧಾನ ಭೂಗಿಲೇಳುವ ಮುನ್ಸೂಚನೆ ನೀಡುತ್ತಿದೆ.

ಇದೀಗ ಸಚಿವ ಸ್ಥಾನ ವಂಚಿತರಾದ ನಾಯಕರ ಮುಂದಿನ ರಾಜಕೀಯ ನಡೆ ಏನಿರಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

You cannot copy content of this page

Exit mobile version