ಹಾಸನ : ಹುಣಸಿನಕೆರೆ ಬಡಾವಣೆ 80 ಪೀಟ್ ರಸ್ತೆಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ಎಪಿಜೆ ಅಬ್ದುಲ್ ಕಲಾಂ ಆಟೋ ನಿಲ್ದಾಣವನ್ನು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ ಪ್ರಕಾಶ್ ಉದ್ಘಾಟಿಸಿದರು ಇದೆ ವೇಳೆ ಶಾಸಕರು ಮಾತನಾಡಿ, ಈ ಭಾಗದ ಆಟೋ ಚಾಲಕರ ಕಳೆದ ಹಲವು ದಿನಗಳ ಬೇಡಿಕೆಯಾಗಿದ್ದ ಇಂದು ಆಟೋ ನಿಲ್ದಾಣ ಸ್ಥಾಪಿಸಿ ಉದ್ಘಾಟನೆ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಆಟೋ ಖರೀದಿಸಿ ತಮ್ಮ ಬದುಕು ಕಟ್ಟಿಕೊಂಡಿರುವ ಆಟೋ ಚಾಲಕರು ಬಿಸಿಲು ಹಾಗೂ ಮಳೆಯಿಂದ ತಮ್ಮ ಆಟೋ ಗಳನ್ನು ರಕ್ಷಿಸುವುದು ಸವಾಲಾಗಿದೆ ಆದುದರಿಂದ ಶಾಸಕರ ಅನುದಾನದಲ್ಲಿ ಸಣ್ಣ ಸಹಾಯಸ್ಥ ಚಾಚಲಾಗಿದೆ ಎಂದರು. ಒಂದೆಡೆ ಬಾಡಿಗೆ ಕೊರತೆಯಿಂದ ಬಳಸುತ್ತಿರುವ ಆಟೋ ಚಾಲಕರು ತಮ್ಮ ವಾಹನಗಳನ್ನು ರಕ್ಷಣೆ ಮಾಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ಸುಸಜ್ಜಿತವಾದ ಆಟೋ ನಿಲ್ದಾಣ ನಿರ್ಮಿಸಲಾಗಿದ್ದು ಆಟೋ ಚಾಲಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಆಟೋ ನಿಲ್ದಾಣ ಉದ್ಘಾಟಿಸಲು ಬಂದ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಆಟೋ ಚಾಲಕರ ಸಂಘದ ಸದಸ್ಯರು ಪ್ರೀತಿಪೂರ್ವಕವಾಗಿ ಬರಮಾಡಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ನಗರಸಭೆ ಸದಸ್ಯ ರಫೀಕ್, ಜಿ. ಕುಮಾರ್, ಮಹಾಂತೇಶ್ ಸೇರಿದಂತೆ ಆ ಭಾಗದ ವಾರ್ಡ್ ಸದಸ್ಯರು, ಧಾರ್ಮಿಕ ಮುಖಂಡರು ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.