Home ಬ್ರೇಕಿಂಗ್ ಸುದ್ದಿ Breaking News : ಸಂಸತ್ ಕಲಾಪದಿಂದ ಸಂಸದ ಡಿಕೆ ಸುರೇಶ್ ಅಮಾನತು

Breaking News : ಸಂಸತ್ ಕಲಾಪದಿಂದ ಸಂಸದ ಡಿಕೆ ಸುರೇಶ್ ಅಮಾನತು

0

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ “ಅಶಿಸ್ತಿನ ವರ್ತನೆ”ಯ ನೆಪವೊಡ್ಡಿ ಕರ್ನಾಟಕದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಸೇರಿದಂತೆ ದೀಪಕ್ ಬೈಜ್ ಹಾಗೂ ನಕುಲ್ ನಾಥ್ ಅವರುಗಳನ್ನೂ ಸದನ ಕಲಾಪದಿಂದ ಅಮಾನತುಗೊಳಿಸಲಾಗಿದೆ. ಈ ಮೂಲಕ ಸಂಸತ್ತಿನಿಂದ ಅಮಾನತಾದ ಸಂಸದರ ಸಂಖ್ಯೆ 146 ಕ್ಕೆ ಏರಿದೆ.

ಇದಕ್ಕೂ ಮುನ್ನ ಅಮಾನತು ಪ್ರಕ್ರಿಯೆಯನ್ನು ವಿರೋಧಿಸಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಸಂಸದರ ಅಮಾನತು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯಲ್ಲಿ ಸರ್ಕಾರದ ಅನೈತಿಕ ಮತ್ತು ಕಾನೂನು ಬಾಹಿರ ವರ್ತನೆ ವಿರುದ್ಧ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.

You cannot copy content of this page

Exit mobile version