ಕ್ಯಾಶ್ ಫಾರ್ ಕ್ವೆರಿ (ಹಣಕ್ಕಾಗಿ ಪ್ರಶ್ನೆ) ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಸಮಿತಿಯ ಶಿಫಾರಸಿನ ಮೇರೆಗೆ ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಅವರನ್ನ ಸಂಸತ್ತಿನಿಂದ ಉಚ್ಚಾಟಿಸಲಾಗಿದೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರನ್ನ ಉಚ್ಚಾಟಿಸಲು ಶಿಫಾರಸು ಮಾಡಿದ ವರದಿಯನ್ನು ಲೋಕಸಭಾ ನೈತಿಕ ಸಮಿತಿ ಶುಕ್ರವಾರ ಮಂಡಿಸಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಆರೋಪಗಳ ಬಗ್ಗೆ ತನಿಖೆ ನಡೆಸಿದ ನೈತಿಕ ಸಮಿತಿಯು ನವೆಂಬರ್ 9 ರಂದು ತನ್ನ 500 ಪುಟಗಳ ವರದಿಯನ್ನು ಅಂಗೀಕರಿಸಿದ್ದು, ಮೊಯಿತ್ರಾ ಅವರ “ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಘೋರ ಮತ್ತು ಕ್ರಿಮಿನಲ್ ನಡವಳಿಕೆ” ಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು 17 ನೇ ಲೋಕಸಭೆಯಿಂದ ಹೊರಹಾಕುವಂತೆ ಶಿಫಾರಸು ಮಾಡಿದೆ.
ಜೊತೆಗೆ “ಅಶಿಸ್ತಿನ ನಡವಳಿಕೆ ಮತ್ತು ವದಂತಿಗಳನ್ನು ಹರಡುವುದಕ್ಕಾಗಿ” ಸಹ ಸಂಸದ ಡ್ಯಾನಿಶ್ ಅಲಿ ಅವರಿಗೆ ‘ಎಚ್ಚರಿಕೆ’ ನೀಡಬೇಕು ಎಂದು ನೀತಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಕರೆ ನೀಡಿದೆ.
ಬಿಜೆಪಿ ಶಾಸಕ ವಿನೋದ್ ಕುಮಾರ್ ನೇತೃತ್ವದ ತಂಡವು ತನ್ನ ವರದಿಯಲ್ಲಿ “ಕಠಿಣ ಶಿಕ್ಷೆ” ಮತ್ತು ಸರ್ಕಾರದ ಕಡೆಯಿಂದ ತನಿಖೆಗೆ ಕರೆ ನೀಡಿದೆ. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಅವರು ಉದ್ಯಮಿ ಕಡೆಯಿಂದ ನಗದು ಮತ್ತು ಇತರ ಉಡುಗೊರೆಗಳನ್ನು ತೆಗೆದುಕೊಂಡಿದ್ದಾರೆ ಎಂಬ ಆರೋಪವನ್ನು ಮೊಯಿತ್ರಾ ಎದುರಿಸುತ್ತಿದ್ದಾರೆ.