Home ರಾಜ್ಯ 2025-26ನೇ ಸಾಲಿನ 40.30 ಕೋಟಿ ಉಳಿತಾಯ ಬಜೆಟ ಮಂಡಿಸಿದ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ

2025-26ನೇ ಸಾಲಿನ 40.30 ಕೋಟಿ ಉಳಿತಾಯ ಬಜೆಟ ಮಂಡಿಸಿದ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ

ಹಾಸನ: ಈಗಾಗಲೇ ಹಾಸನ ನಗರಸಬೆಯನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಈ ಸಂದರ್ಭದಲ್ಲಿ 2025-26ನೇ ಸಾಲಿನ ಆಯವ್ಯಯದ 40.30 ಕೋಟಿ ಉಳಿತಾಯ ಬಜೆಟನ್ನು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಬುಧವಾರದಂದು ಮಂಡಿಸಿದರು. ಕೇವಲ ಒಂದು ನಿಮಿಷದಲ್ಲಿ ಬಜೆಟ್ ಓದುವುದಕ್ಕೆ ಸದಸ್ಯರು ಅವಕಾಶ ಕೊಟ್ಟು ಪೂರ್ಣ ಓದುವುದಕ್ಕೆ ಅವಕಾಶ ಕೊಡದೆ ನಾವೆ ಒದಿಕೊಳ್ಳುತ್ತೇವೆ ಎಂದು ಹೇಳಿ ಮದ್ಯಾಹ್ನ ಊಟಕ್ಕೆ ತೆರಳಿದ ಪ್ರಸಂಗ ನಡೆಯಿತು.
ತಾಲೂಕಿನ ಗೊರೂರು ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಬಜೆಟ್ ಮಂಡನೆಯನ್ನು ನಗರಸಭೆಯ ಎಲ್ಲಾ ಸದಸ್ಯರ ಎದುರು ನಗರ ಸಭೆಗೆ 7522.5 ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದ್ದು, 40.30 ಕೋಟಿ ಉಳಿತಾಯ ಬಜೆಟನ್ನು ಓದಲಾಯಿತು. ಈ ವೇಳೆ ಸದಸ್ಯರು ಮೇಜು ಕುಟ್ಟುವ ಮೂಲಕ ಬಜೆಟ್‌ನ್ನು ಅನುಮೋದಿಸಿದರು. ಮೀನು ಮಾರುಕಟ್ಟೆ ಸಂಕಿರಣ ನಿರ್ಮಾಣ ಮಾಡಲಾಗುತ್ತಿದ್ದು 50 ಲಕ್ಷಗಳನ್ನು ಕಾಯ್ದಿಸಲಾಗಿದೆ, ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿಗೆ 50 ಲಕ್ಷ ಸುವ್ಯವಸ್ಥಿತವಾದ ಸ್ವಿಚ್ ಬೋರ್ಡ್ ಗಳನ್ನು ಅಳವಡಿಸಲು ಬೀದಿ ದೀಪಗಳಿಂದ ವಿದ್ಯುತ್ ಉಳಿತಾಯ ಮಾಡಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅಡಿ 150 ಲಕ್ಷ ಗಳನ್ನು ಕಾಯ್ದಿರಿಸಲಾಗಿದೆ.

ನಗರದ ಇತರೆ ಬಡ ಜನರ ಕಲ್ಯಾಣ ಕಾರ್ಯಕ್ರಮ ವಿಕಲ ಚೇತನರ ಕಲ್ಯಾಣ ಕಾರ್ಯಕ್ರಮ ವಿಶ್ರಾಂತಿ ಗೃಹ ಮತ್ತು ಶೌಚಾಲಯ ಕಟ್ಟಡ ನಿರ್ಮಾಣ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಕಂಪ್ಯೂಟರ್ ವಿತರಣಾ ಕಾರ್ಯ ಕ್ರಮ, ಉಚಿತ ಆರೋಗ್ಯ ತಪಾಸಣೆ ಸಿಸಿ ಕ್ಯಾಮೆರಾ ಅಳವಡಿಕೆ, ನಗರಸಭೆ ಸದಸ್ಯರುಗಳ ಅಧ್ಯಯನ ಪ್ರವಾಸ, ಪೌರಕಾರ್ಮಿಕರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಗರದಾದ್ಯಂತ ರಸ್ತೆ ಮತ್ತು ಪಾದಚಾರ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ 10,000 ಲಕ್ಷ ರೂ. ಕಾಯ್ದಿರಿಸಲಾಗಿದೆ. ದುರಸ್ತಿ ನಿರ್ವಹಣೆಗಾಗಿ 500 ಲಕ್ಷ ಕಾಯ್ದಿರಿಸಲಾಗಿದೆ. ನೀರು ಸರಬರಾಜು ಕಾಮಗಾರಿಗೆ 1500 ಲಕ್ಷ,ಪೈಪ್ ಲೈನ್ ದುರಸ್ತಿ ಕಾಮಗಾರಿ ಮತ್ತು ನಿರ್ವಹಣೆಗೆ 1000 ಲಕ್ಷ ಮೀಸಲಿರಿಸಲಾಗಿದೆ. ನಗರದ ಬೆಳವಣಿಗೆಗೆ ತಕ್ಕಂತೆ ಉತ್ತಮ ಒಳಚರಂಡಿ ವ್ಯವಸ್ಥೆ ಕಲ್ಪಿಸಲು 7000 ಲಕ್ಷ, ಯುಜಿಡಿ, ಪೈಪ್‌ಲೈನ್ ರಿಪೇರಿಗಾಗಿ 540 ಲಕ್ಷ ರೂ. ಕಾಯ್ದಿರಿಸಲಾಗಿದೆ. ನಗರಸಭೆ ಮುಂದುವರಿದ ಕಚೇರಿ ಕಟ್ಟಡ ನಿರ್ಮಾಣಕ್ಕೆ 1310 ಲಕ್ಷ ಕಾಯ್ದಿರಿಸಲಾಗಿದೆ. ಹಾಗೆಯೇ ಪೌರಾಯುಕ್ತರ ವಸತಿ ಗೃಹ ನಿರ್ಮಾಣಕ್ಕಾಗಿ 100 ಲಕ್ಷ ಇಡಲಾಗಿದೆ. ಈ ಆರ್ಥಿಕ ವರ್ಷದ್ಲಲಿ ನಗರದಲ್ಲಿ ಸೂಕ್ತ ಸ್ಥಳ ಗುರುತಿಸಿ ಸುಸಜ್ಜಿತವಾದ ಸಗಟು ಮತ್ತು ಚಿಲ್ಲರೆ ಮಾರಾಟದ ಮೀನು ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿ 50 ಲಕ್ಷ ಕಾಯ್ದಿರಿಸಲಾಗಿದೆ.


ನಗರಸಭೆ ವ್ಯಾಪ್ತಿಯ ಸ್ಮಶಾನಗಳ (ವಿದ್ಯುತ್) ಅಭಿವೃದ್ಧಿಗೆ 500 ಲಕ್ಷ ರೂ. ಕಾಯ್ದಿರಿಸಲಾಗಿದೆ. ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕೆ 150.94 ಲಕ್ಷ, ಇತರೆ ಬಡಜನರ ಕಲ್ಯಾಣಕ್ಕಾಗಿ 38 ಲಕ್ಷ, ವಿಶೇಷ ಚೇತನರ ಕಲ್ಯಾಣಕ್ಕಾಗಿ 37 ಲಕ್ಷ, ಪೌರಕಾರ್ಮಿಕರ ವಿಶ್ರಾಂತಿಗೃಹ ಶೌಚಾಲಯಕ್ಕೆ 210 ಲಕ್ಷ, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಕಂಪ್ಯೂಟರ್‌ಗೆ 10 ಲಕ್ಷ, ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಶಿಬಿರಕ್ಕೆ 10 ಲಕ್ಷ, 35 ವಾರ್ಡ್ಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲು 55 ಲಕ್ಷ, ನಗರಸಭೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ 10 ಲಕ್ಷ, ಪೌರಕಾರ್ಮಿಕರಿಗೆ ವಿದ್ಯುತ್ ಚಾಲಿತ ಬೈಕ್ ನೀಡಲು 20 ಲಕ್ಷ, 35 ವಾರ್ಡ್ಗಳಲ್ಲೂ ಪಾರ್ಕ್ಗೆ ಅಭಿವೃದ್ಧಿಗೆ 225 ಲಕ್ಷ, ದನಗಳ ಜಾತ್ರಾ ಮಹೋತ್ಸವಕ್ಕೆ 10 ಲಕ್ಷ, ಘನತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸಲು 50 ಲಕ್ಷ, ಸಾಹಿತ್ಯ ಸಮ್ಮೇಳನ-ಪತ್ರಿಕಾ ದಿನಾಚರಣೆಗೆ 8 ಲಕ್ಷ, ಕ್ರೀಡಾಚಟುವಟಿಕೆಗಳಿಗೆ ಪ್ರೋತ್ಸಾಹಧನ ನೀಡಲು 8 ಲಕ್ಷ ಸೇರಿದಂತೆ ಇತರೆಗಳಿಗೆ ಹಣ ಮೀಸಲಿಟ್ಟಿರುವ ಬಗ್ಗೆ ಮಾಹಿತಿ ನೀಡಿದರು.


ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಂಠಿತಗೊAಡು ತಾಪಮಾನ ಏರಿಕೆ ಆಗಿ ಪರಿಸರ ಮಾಲಿನ್ಯ ಉಂಟಾಗಿದೆ. ಇದನ್ನು ತಡೆಗಟ್ಟಲು ಪರಿಸರ ಉಳಿಸಿ ಆಂದೋಲನ, ಕೆರೆಗಳ ಪುನಶ್ಚೇತನ, ಪ್ರಮುಖ ರಸ್ತೆ, ಪಾರ್ಕ್ಗಳಲ್ಲಿ ಹಾಗೂ ಅಗಿಲೆ ನೆಲಭರ್ತಿ ಘಟಕದ ಸುತ್ತಮುತ್ತ ಗಿಡಗಳನ್ನು ನೆಡಲು 80 ಲಕ್ಷ ರೂ. ಕಾಯ್ದಿರಿಸಲಾಗಿದೆ. ಬೀದಿ ದೀಪಗಳಿಗೆ ವ್ಯವಸ್ಥಿತ ಸ್ವಿಚ್ ಬೋರ್ಡ್ ಹಾಕಲು ನಿರ್ಧಾರ ಮಾಡಲಾಗಿದೆ ಎಂದರು. ಅಗಿಲೆ ನೆಲಭರ್ತಿ ಜಾಗದಲ್ಲಿ ಹಲವು ವರ್ಷಗಳಿಂದ ಸಂಗ್ರಹಣೆ ಮಾಡಲಾಗಿರುವ ಹಳೆ ತ್ಯಾಜ್ಯದ ರಾಶಿಯನ್ನು ವಸ್ತು ನಿಯಮ 2016 ಮತ್ತು ರಾಷ್ಟಿಯ ಹಸಿರು ನ್ಯಾಯಪೀಠದ ನಿರ್ದೇಶನದಂತೆ ಸಂಸ್ಕರಣೆ ಮಾಡಲು ಡಿಪಿಆರ್ ತಯಾರಿಸಲಾಗಿದ್ದು, ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ಒಟ್ಟು 2800 ಲಕ್ಷಗಳಲ್ಲಿ ಕೇಂದ್ರ-ರಾಜ್ಯದ ಪಾಲಿನ
ಮತ್ತು ಸ್ಥಳೀಯ ಸಂಸ್ಥೆ ನಿಧಿಯಿಂದ ಕಾಯ್ದಿರಿಸಲಾಗಿದೆ ಎಂದು ಅಧ್ಯಕ್ಷರು ವಿವರಿಸಿದರು.


ವೊಧಾನ ಪರಿಷತ್ತು ಸದಸ್ಯ ಸೂರಜ್ ರೇವಣ್ಣ ಮಾತನಾಡಿ, 2025-26ನೇ ಸಾಲಿನ ಈ ಬಜೆಟ್ ಆಶಾದಾಯಕ ಆಗಿದೆ.ನಗರಸಭೆಗೆ ಸೇರಿರುವ ಹೊಸ ಹಳ್ಳಿಗಳ ಅಭಿವೃದ್ಧಿ ಸೇರಿದಂತೆ ರಸ್ತೆ, ಒಳಚರಂಡಿ, ನೀರು, ಮೂಲ ಭೂತ ಸೌಕರ್ಯ ಕಲ್ಪಿಸಲು ಅನುದಾನ ನಿಗದಿ ಜೊತೆಗೆ ಕ್ರೀಡೆ, ಹಬ್ಬ ಹರಿದಿನ, ಪೌರಕಾರ್ಮಿಕರ ಗೃಹ ನಿರ್ಮಾಣಕ್ಕೂ ಹಣ ಹಂಚಿಕೆ ಮಾಡಲಾಗಿದೆ. ಹಸಿರೀಕರಣಕ್ಕೂ ಒತ್ತು ನೀಡಲಾಗಿದೆ. ಪಕ್ಷಾತೀತವಾಗಿ ನಗರಸಭೆ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗಲಿ. ಎಲ್ಲಾ ಸದಸ್ಯರು ಒಟ್ಟಾಗಿ ಕೆಲಸ ಮಾಡಬೇಕು. ಮುಂದೆ ನಡೆಯುವ ಈ ಬಜೆಟ್ ಸಭೆಯಲ್ಲಿ ಪ್ರತಿ ವಿಷಯ ಚರ್ಚೆಎಗೆ ಬರಬೇಕೆಂದರು. ನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿ ಎಂದು ಹಾರೈಸಿದರು.

You cannot copy content of this page

Exit mobile version