Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ನಾಡಗೀತೆ ಹಾಡಲಿಕ್ಕೆ 2 ನಿಮಿಷ 30 ಸೆಕೆಂಡ್‌ ಕಾಲಮಿತಿ ನಿಗದಿ: ಸಿಎಂ ಬೊಮ್ಮಾಯಿ

ನಾಡಗೀತೆ ಹಾಡಲಿಕ್ಕೆ 2 ನಿಮಿಷ 30 ಸೆಕೆಂಡ್‌ ಕಾಲಮಿತಿ ನಿಗದಿ: ಸಿಎಂ ಬೊಮ್ಮಾಯಿ

0

ಬೆಂಗಳೂರು : ನಮ್ಮ ನಾಡಗೀತೆಯಾದ “ಜಯಭಾರತ ಜನನಿಯ ತನುಜಾತೆ” ಗೆ ದಾಟಿ ಹಾಗೂ ಇಂತಿಷ್ಟೇ ನಿಮಿಷದಲ್ಲಿ ಹಾಡಬೇಕೆಂದು ಕಾಲಮಿತಿಯನ್ನು ನಿಗದಿಯಾಗಿದೆ ಎಂದು  ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ.

ಇಷ್ಟು ದಿನ ರಾಷ್ಟ್ರಗೀತೆಯಾದ  “ಜನ ಗಣ ಮನ” ಗೀತೆಗೆ ಮಾತ್ರ ಕಾಲಮಿತಿ ನಿಗದಿಯಾಗಿತ್ತು ಆದರೆ ಇನ್ನುಮುಂದೆ ನಮ್ಮ ಕನ್ನಡ ನಾಡಿನ ಹೆಮ್ಮೆಯಾದ ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆ ಹಾಡಲಿಕ್ಕೂ ಇಂತಿಷ್ಟೇ ಸಮಯದಲ್ಲಿ ಹಾಡಬೇಕು ಎಂದು ಕಾಲಮಿತಿಯನ್ನು ನೀಡಿದೆ. 2 ನಿಮಿಷ 30 ಸೆಕೆಂಡ್‌ ರಷ್ಟು ಸಮಯದಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಈ ಕುರಿತು ಟ್ಟೀಟ್‌ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ “ರಾಷ್ಟ್ರಕವಿ ಕುವೆಂಪು ವಿರಚಿತ ನಾಡಿನ ಹೆಮ್ಮೆಯ ನಾಡಗೀತೆ “ಜಯಭಾರತ ಜನನಿಯ ತನುಜಾತೆ”ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಿದ್ದೇವೆ. ಸಂಗೀತ ವಿದೂಷಿ ಎಸ್ ಆರ್. ಲೀಲಾವತಿ ಅಧ್ಯಕ್ಷತೆ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ, ಇನ್ನು ಮುಂದೆ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್ ನಲ್ಲಿ ಹಾಡಲಾಗುತ್ತದೆ.” ಎಂದು ಹೇಳಿದ್ದಾರೆ.

https://video.twimg.com/ext_tw_video/1573235733384597506/pu/pl/1280×720/-Jdtlfsdn6VZ9-oP.m3u8?container=fmp4

You cannot copy content of this page

Exit mobile version