‘ನಟಸಾರ್ವಭೌಮ’

0

ಹೌದು 
ಸತ್ಯ
ಹಲವರು ಹೇಳುವಂತೆ
ಅವನೊಬ್ಬ ಬಹುರೂಪಿ
ನಟನೇ
ಕಾಲ ಕೊಟ್ಟ ಪಾತ್ರವ
ಪರಕಾಯ ಪ್ರವೇಶ ಮಾಡಿದವನು

ರಾಷ್ಟ್ರ ನಾಯಕ ಸೇವಕ 
ಮಹಾತ್ಮ  ಏಕಪಾತ್ರಾಭಿನಯ
ಯಾವುದಕ್ಕೂ ಸೈ

ರಾಷ್ಟ್ರಪಿತ  ದೇಶ ಭಕ್ತ 
ಪರದೇಶಿ ಪ್ರಭುತ್ವದ ಮಿತ್ರ
ಭವಿಷ್ಯ ನುಡಿವ  ಸನಾತನಿ
ಅಸ್ಪೃಶ್ಯತೆ ತೊಳೆವ ಭಂಗಿ 
ಉಪವಾಸ ಸೆರೆವಾಸ
ಅಹಿಂಸೆ ನೂಲುವ 
ಸತ್ಯಾಗ್ರಹಿ ಪಾತ್ರವೇ ತಾನಾಗಿ
ನಂಬಿಸಿ ರಂಜಿಸಿದವನು

ವೈಷ್ಣವ ಜನತೋ..
ಈಶ್ವರ್ ಅಲ್ಲಾ ತೇರಾ ನಾಮ್ 
ಹಾಡಿ ಮಂತ್ರ ಮುಗ್ಧಗೊಳಿಸಿದ
ಅರೆಬೆತ್ತಲೆ ಫಕೀರ

ಜಗದ ಎಲ್ಲ ಕೆಡುಕುಗಳ ವಿರುದ್ಧ
ಕೊನೆಗೆ ತನ್ನವಿರುದ್ಧ ತಾನೇ
ಹೋರಾಡುತ್ತಾ
ಪಾತ್ರಗಳ ಮೂಲಕ ಚಲಿಸುತ್ತಲೇ 
ಮತೀಯತೆಯ ಗುಂಡುಗಳ
ನಗು ನಗುತ್ತಲೇ ಎದೆಗಿಳಿಸಿಕೊಂಡು
ಹೇ ರಾಮ್  ಎಂದು
ನೇಪತ್ಯಕ್ಕೆ ಸರಿದದ್ದು ಎಲ್ಲವೂ…
ನಟನೆಯೇ ಆದರೆ 
ಗಾಂಧಿ ಮನುಕುಲದ 
ಶ್ರೇಷ್ಠ ನಟನೇ ಹೌದು

ಸಂಭಾವನೆ ಇಲ್ಲದೇ
ಸಂತನಂತೆ ನಟಿಸಿದ
ಮೇರು ನಟನಿಗೆ 
ಚಪ್ಪಾಳೆಯನ್ನಾದರೂ ಹೊಡೆಯೋಣ
ಅವನ ಜೋಳಿಗೆ ತುಂಬಲಿ 

ಜೋಳಿಗೆಗೂ ಕನ್ನ ಕೊರೆದು
ಕಾಳು ಪರೀಕ್ಷೆಗಿಳಿಯುವರಿಗೆ 
ನಿರಾಸೆಯಾಗದಿರಲಿ

  • ಹಂದಲಗೆರೆ ಗಿರೀಶ್

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ಕಾಂತಾರ: ನಾವು ಬಂದದ್ದು ಎಲ್ಲಿಂದ ಎಂಬುದನ್ನು ಮರೆತುಬಿಡುವುದು ದೊಡ್ಡ ಸಮಸ್ಯೆ

ಪೀಪಲ್‌ ಮೀಡಿಯಾ ವಿಶೇಷ
ನವೀನ್ ಸೂರಿಂಜೆ

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

You cannot copy content of this page

Exit mobile version