ವಿಜಯವಾಡ/ಆಂದ್ರ ಪ್ರದೇಶ: ʼಜನರು ಉತ್ತಮ ಆಡಳಿತ ಮಾದರಿಯನ್ನು ಬಯಸುತ್ತಾರೆ, ನಾವು ಅದನ್ನು ಇಲ್ಲಿ ಜಾರಿಗೆ ತರುತ್ತೇವೆʼ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಹೇಳಿದರು.
ನಗರದ ಇಂದ್ರಕೀಲಾದ್ರಿಯಲ್ಲಿರುವ ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿ ವರ್ಲ ದೇವಸ್ಥಾನಕ್ಕೆ ಬೇಟಿ ನೀಡಿ ಮಾತನಾಡಿದ ಅವರು ನಾವು ತರುವ ಆಡಳಿತದಿಂದ ಯುವಕರಿಗೆ ಉದ್ಯೋಗ ಸಿಗುತ್ತದೆ, ರಾಜ್ಯಕ್ಕೆ ಬಂಡವಾಳ, ಅಭಿವೃದ್ಧಿ, ರಸ್ತೆಗಳು ಸಿಗುತ್ತವೆ ಮತ್ತು ನಾವು ನಮ್ಮ ಪ್ರಚಾರವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ತಿಳಿಸಿದರು.