Home ದೇಶ ಪಿವಿಎನ್‌ ಬದಲು ರಾಜೀವ್‌ ಪ್ರಧಾನಿಯಾಗಿದ್ದರೆ‌ ಬಾಬರಿ ಮಸೀದಿ ಉಳಿದಿರುತ್ತಿತ್ತು ಮಂದಿರವೂ ನಿರ್ಮಾಣವಾಗಿರುತ್ತಿತ್ತು: ಮಣಿಶಂಕರ್‌ ಅಯ್ಯರ್

ಪಿವಿಎನ್‌ ಬದಲು ರಾಜೀವ್‌ ಪ್ರಧಾನಿಯಾಗಿದ್ದರೆ‌ ಬಾಬರಿ ಮಸೀದಿ ಉಳಿದಿರುತ್ತಿತ್ತು ಮಂದಿರವೂ ನಿರ್ಮಾಣವಾಗಿರುತ್ತಿತ್ತು: ಮಣಿಶಂಕರ್‌ ಅಯ್ಯರ್

0

ಇದುವರೆಗೆ ಎಲ್ಲರೂ ತಿಳಿದಿರುವಂತೆ 1986ರಲ್ಲಿ ಬಾಬ್ರಿಯ ಬೀಗ ತೆಗೆದಿದ್ದು ರಾಜೀವ್‌ ಗಾಂಧಿಯಲ್ಲ, ಅಂದು ಅದರ ಬಾಗಿಲು ತೆರೆಯಲು ಕಾರಣರಾಗಿದ್ದು ಅರುಣ್‌ ನೆಹರೂ ಎಂದು ಮಣಿಶಂಖರ್‌ ಅಯ್ಯರ್‌ ಹೇಳಿದ್ದಾರೆ. ಅರುಣ್‌ ನೆಹರೂ ಬಿಜೆಪಿ ಮನುಷ್ಯನಾಗಿದ್ದು ಅವರನ್ನು ಬಿಜೆಪಿಯವರು ಕಾಂಗ್ರೆಸ್‌ ಪಕ್ಷದಲ್ಲಿ ಇರುವಂತೆ ನೋಡಿಕೊಂಡಿದ್ದರು ಎಂದೂ ಅಯ್ಯರ್‌ ಹೇಳಿದ್ದಾರೆ.

ಮಣಿಶಂಕರ್‌ ಅಯ್ಯರ್‌ ಅವರು ತಮ್ಮ ಹೊಸ ಪುಸ್ತಕ ‘The Rajiv I Knew’ ಬಿಡುಗಡೆ ಸಮಾರಂಭದಲ್ಲಿ ಮೇಲಿನ ಮಾತುಗಳನ್ನು ಹೇಳಿದರು.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅಯ್ಯರ್, ರಾಜೀವ್ ಗಾಂಧಿಯವರು ಮಸೀದಿಯನ್ನು ಉಳಿಸಿಕೊಂಡು ಮಂದಿರ ಕಟ್ಟುವಂತೆ ಹೇಳಿದ್ದರು. ಈಗ ಮಂದಿರ ಕಟ್ಟಬೇಕು, ಜೊತಗೆ ಮಸೀದಿಯನ್ನು ಬೇರೆ ಕಡೆ ಕಟ್ಟಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂದು ರೀತಿಯಲ್ಲಿ, ಇದು ರಾಜೀವ್‌ ಹೊಂದಿದ್ದ ನಿರ್ಧಾರವೇ ಆಗಿದೆ. ಪಿ.ವಿ.ನರಸಿಂಹರಾವ್ ಅವರ ಜಾಗದಲ್ಲಿ ರಾಜೀವ್ ಗಾಂಧಿ ಅವರು ಜೀವಂತವಾಗಿದ್ದು ಪ್ರಧಾನಿಯಾಗಿದ್ದಿದ್ದರೆ ಬಾಬರಿ ಮಸೀದಿ ಇಂದಿಗೂ ಉಳಿಯುತ್ತಿತ್ತು ಎಂದು ಹೇಳಿದರು.

1986ರಲ್ಲಿ ಬಾಬರಿ ಮಸೀದಿಯ ಬಾಗಿಲು ತೆರೆಯಲು ಕಾರಣಕರ್ತರು ಕಾಂಗ್ರೆಸ್ ನಾಯಕ ಅರುಣ್ ನೆಹರೂ, ಆಗಿನ ಪ್ರಧಾನಿ ರಾಜೀವ್ ಗಾಂಧಿ ಅಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಶುಕ್ರವಾರ ಹೇಳಿದ್ದಾರೆ. ಅದು ಕಾಂಗ್ರೆಸ್ ಪಕ್ಷದಲ್ಲಿ ಅರುಣ್ ನೆಹರೂ ಪ್ರಭಾವ ಇದ್ದ ಕಾಲ. ಅರುಣ್ ನೆಹರೂ ಅವರನ್ನು ಬಿಜೆಪಿಯವರು ಕಾಂಗ್ರೆಸ್‌ನಲ್ಲಿ ಇರುವಂತೆ ನೋಡಿಕೊಂಡಿದ್ದರು, ನಂತರ, ಅವರ ಯೋಜನೆ ಪೂರೈಸಿಕೊಂಡ ನಂತರ ಅವರು ಬಿಜೆಪಿ ಸೇರಿದರು ಎಂದು ಅಯ್ಯರ್ ಆರೋಪಿಸಿದರು.

ರಾಜೀವ್‌ ಗಾಂಧಿ ಅಂದು ಸರಿಯಾದ ಪರಿಹಾರ ಕಂಡುಕೊಂಡಿದ್ದರೆ ಇಂದು ಬಿಜೆಪಿಗೆ ರಾಜಕೀಯ ಮಾಡಲು ವಿಷಯವೇ ಇದ್ದಿರುತ್ತಿರಲಿಲ್ಲ ಎಂದೂ ಅವರು ಹೇಳಿದರು. ಜನವರಿ 22 ರಂದು ರಾಮಮಂದಿರ ಶಂಕುಸ್ಥಾಪನೆ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ನಾಯಕತ್ವದ ನಿರ್ಧಾರವನ್ನು ಮಣಿಶಂಕರ್ ಅಯ್ಯರ್ ಶ್ಲಾಘಿಸಿದರು.

ವಾಜಪೇಯಿಯವರ ಬಿಜೆಪಿಯನ್ನು ಮೋದಿ ಹೈಜಾಕ್‌ ಮಾಡಿದ್ದಾರೆ ಎಂದು ಅಯ್ಯರ್‌ ಆರೋಪಿಸಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗೆ ಕೆಲಸ ಮಾಡಿದ ನಾಯಕರಲ್ಲಿ ಮಣಿಶಂಕರ್ ಅಯ್ಯರ್ ಕೂಡಾ ಒಬ್ಬರು. ಅಯ್ಯರ್ ಅವರ ಪುಸ್ತಕದಲ್ಲಿ ಬಾಬರಿ-ರಾಮ ಜನ್ಮಭೂಮಿ ವಿಷಯವಲ್ಲದೆ, ಭಾರತ-ಶ್ರೀಲಂಕಾ ಒಪ್ಪಂದ, ಶಾ ಬಾನೋ ಪ್ರಕರಣ ಮತ್ತು ಭಾರತೀಯ ಶಾಂತಿ ಪಾಲನಾ ಪಡೆಗಳಂತಹ ವಿಷಯಗಳನ್ನೂ ಚರ್ಚಿಸಲಾಗಿದೆ. ಅಯ್ಯರ್ ಅವರ ಪುಸ್ತಕ ಆಗಸ್ಟ್ 2023ರಲ್ಲಿ ಬಿಡುಗಡೆಯಾಗಿತ್ತು.

ಆ ಸಮಯದಲ್ಲಿ ಪ್ರಕಟವಾದ ಅವರ ಪುಸ್ತಕದ ಹೆಸರು ‘ಮೆಮೊಯಿರ್ಸ್ ಆಫ್ ಎ ಮೇವರಿಕ್ – ದಿ ಫಸ್ಟ್ ಫಿಫ್ಟಿ ಇಯರ್ಸ್ (1941-1991)’. ಈ ಪುಸ್ತಕದಲ್ಲಿ ಅಯ್ಯರ್ ಅವರು ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಹಿಂದುತ್ವದ ಬಗೆಗಿನ ಪ್ರೇಮದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪುಸ್ತಕದಲ್ಲಿ ಪಿವಿ ನರಸಿಂಹರಾವ್ ಅವರು ಬಿಜೆಪಿಯ ಮೊದಲ ಪ್ರಧಾನಿ ಎಂದು ಬಣ್ಣಿಸಿದ್ದಾರೆ.

ಈ ಲೇಖನ ಓದಿದ್ದೀರಾ?:

You cannot copy content of this page

Exit mobile version