ನೆಲ್ಲಿ ಸೆಂಗುಪ್ತಾ, ಕೇಂಬ್ರಿಡ್ಜ್ ನಲ್ಲಿರುವ ತನ್ನ ಪೋಷಕರ ಮನೆಯಲ್ಲಿ ತನ್ನ ಭಾವಿ ಪತಿಯನ್ನು ಭೇಟಿಯಾದ ಇಂಗ್ಲಿಷ್ ಮಹಿಳೆ. ಜತೀಂದ್ರ ಮೋಹನ್ ಸೆಂಗುಪ್ತಾ (1921 ರಲ್ಲಿ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ) ಅವರೊಂದಿಗಿನ ವಿವಾಹವಾದ ನಂತರ ಭಾರತಕ್ಕೆ ಬಂದರು. ಈಕೆ 1933 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಜತೀಂದ್ರ ಮೋಹನ್ ಸೆಂಗುಪ್ತಾರವರೊಂದಿಗೆ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರಿಬ್ಬರೂ ಸರೋಜಿನಿ ನಾಯ್ಡು ಅವರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ನೆಲ್ಲಿಯವರು ಮನೆ ಮನೆಗೆ ಖಾದಿ ಮಾರಾಟ ಮಾಡುವ ಮೂಲಕ ಕಾನೂನನ್ನು ಧಿಕ್ಕರಿಸಿದ್ದರು. ಕಾನೂನುಬಾಹಿರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆರೋಪದಡಿಯಲ್ಲಿ, ದೆಹಲಿಯಲ್ಲಿ ನಾಲ್ಕು ತಿಂಗಳ ಅವಧಿಯವರೆಗೆ ಜೈಲಿನಲ್ಲಿದ್ದರು. ಅವರ ಮನೆಯಲ್ಲಿ ಆಗಾಗ್ಗೆ, ಮುಖ್ಯವಾಗಿ ಸುತ್ತಮುತ್ತಲಿನಲ್ಲಿ ಗಲಭೆಗಳು ಜರುಗಿದ ಸಂದರ್ಭಗಳಲ್ಲಿ ಸಭೆಗಳು ನಡೆಯುತ್ತಿದ್ದವು,
1973 ರಲ್ಲಿ ಭಾರತ ಸರ್ಕಾರವು ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.