Home Uncategorized ಅಹಿತಕರ ಘಟನೆ ನಡೆಯದಂತೆ ಶೀಘ್ರ ಹೊಸ ಕಾಯ್ದೆ – ಸಿ.ಎಂ ಸಿದ್ದರಾಮಯ್ಯ

ಅಹಿತಕರ ಘಟನೆ ನಡೆಯದಂತೆ ಶೀಘ್ರ ಹೊಸ ಕಾಯ್ದೆ – ಸಿ.ಎಂ ಸಿದ್ದರಾಮಯ್ಯ

ನವದೆಹಲಿ : ಬೆಂಗಳೂರು ಕಾಲ್ತುಳಿತದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ. ಹೈಕಮಾಂಡ್ ನಾಯಕರಿಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಇದರ ಮಧ್ಯೆ, ಅಹಿತಕರ ಘಟನೆ ತಡೆಗೆ ಶೀಘ್ರವೇ ಹೊಸ ಕಾಯ್ದೆ ತರಲಾಗುವುದು ಎಂದು ಲೋಕಸಭೆಯ ವಿಪಕ್ಷ ನಾಯಕರ ರಾಹುಲ್ ಗಾಂಧಿ ಅವರಿಗೆ ಸಿಎಂ ಭರವಸೆ ನೀಡಿದ್ದಾರೆ.

ಸಿಎಂ, ಡಿಸಿಎಂ ಹೈಕಮಾಂಡ್ ಜೊತೆ ಪ್ರತ್ಯೇಕವಾಗಿ ಘಟನೆಗೆ ಸಂಬಂಧಿಸಿದಂತೆ ತಮ್ಮ-ತಮ್ಮ ವರದಿ ಮಂಡಿಸಿದ್ದು, ಮುಂಜಾಗ್ರತಾ ಕ್ರಮ ವಹಿಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.

ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿಗೆ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಾಲ್ತುಳಿತದ ದುರಂತದಲ್ಲಿ 11 ಜನ ಸಾವನ್ನಪ್ಪಿದ್ದಲ್ಲದೇ, ಹಲವರು ಗಂಭೀರಗಾಯಗೊಂಡಿದ್ದರು.

You cannot copy content of this page

Exit mobile version