ಮಂಗಳೂರು: ಪೊಲೀಸ್ ಹಾಗೂ ರಾ ಅಧಿಕಾರಿ ಎಂದು ಹೇಳಿಕೊಂಡು ವಂಚನೆಗೆ ಮಾಡುತ್ತಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಇಡುಕ್ಕಿಯ ಬೆನೆಡಿಕ್ಟ್ ಸಾಬು ಎಂಬಾತ ಬಂಧಿತ ಅರೋಪಿಯಾಗಿದ್ದು 6 ತಿಂಗಳ ಹಿಂದೆ ಜೆ ಎನ್ ಎಂ ಕೋರ್ಸ್ ಗೆ ಸೇರಿಕೊಂಡಿದ್ದ.
ಈತ ಪ್ರಾಂಶುಪಾಲರಿಗೆ ತನ್ನನ್ನು ಕೇರಳದ ಕೃಷಿ ಅಧಿಕಾರಿ ಎಂದೂ, ಇನ್ನೊಮ್ಮೆ ಸಬ್ ಇನ್ಸ್ಪೆಕ್ಟರ್, ಮತ್ತೊಮ್ಮೆ ರಾ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ.
ಕಾಲೇಜಿನಲ್ಲಿ ನಡೆದ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮದಲ್ಲಿ ಈತನ ಅಸಲಿ ಮುಖ ಕಂಡು ಬಂದಿದೆ.
ಪೊಲೀಸರು ಆಯೋಜಿಸಿದ್ದ ಈ ಜಾಗೃತಿ ಕಾರ್ಯಕ್ರಮದಲ್ಲಿ ಸಾಬುವಿನ ವರ್ತನೆ ಕಂಡ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರಿಗೂ ತನ್ನನ್ನು ಫೀಲ್ಡ್ ನಲ್ಲಿ ಇರುವ ರಾ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಪೊಲೀಸ್ ಸಮವಸ್ತ್ರ ಕೂಡ ಹೊಲಿಸಿಕೊಂಡಿದ್ದ.
ಇದರಿಂದ ಅನುಮಾನ ಗೊಂಡ ಉರ್ವ ಪೊಲೀಸರು ಬೆನೆಡಿಕ್ಟ್ ಸಾಬುವನ್ನು ಸೆರೆ ಹಿಡಿದಿದ್ದಾರೆ.