Home ರಾಜ್ಯ ತುಮಕೂರು ಪಂಚರತ್ನ ರಥಯಾತ್ರೆ : ಡಿಸೆಂಬರ್‌ 1ಕ್ಕೆ ತುಮಕೂರಿಗೆ ಪ್ರವೇಶ

ಪಂಚರತ್ನ ರಥಯಾತ್ರೆ : ಡಿಸೆಂಬರ್‌ 1ಕ್ಕೆ ತುಮಕೂರಿಗೆ ಪ್ರವೇಶ

0

ತುಮಕೂರು: ಕರ್ನಾಟಕ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಪ್ರಾರಂಭಗೊಂಡು, ಯಶಸ್ವಿಯಾಗಿ ಸಾಗುತ್ತಿದ್ದು, ಡಿಸೆಂಬರ್ 01 ರಂದು ಪಂಚರತ್ನ ರಥಯಾತ್ರೆ ತುಮಕೂರು ನಗರ ವಿಧಾನಸಭಾ ಕ್ಷೇತ್ರವನ್ನು ಪ್ರವೇಶ ಮಾಡಲಿದೆ.

ಕೋಲಾರದ ಮುಳಬಾಗಿಲಿನಲ್ಲಿ ಮೊದಲನೇ ದಿನದ ಬೃಹತ್‌ ಸಮಾವೇಶವನ್ನು ನಡೆಸಿದ್ದು, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇನ್ನಿತರ ಜೆಡಿಎಸ್‌ ಮುಖಂಡರು ಸೇರಿ ರಥಯಾತ್ರೆಗೆ ಚಾಲನೆ ನೀಡಿದ್ದರು. ಈಗಾಗಲೇ ಕಳೆದ  ನಾಲ್ಕು ದಿನಗಳಿಂದ ಕೋಲಾರದಲ್ಲಿ ಪಂಚರತ್ನ ರಥಯಾತ್ರೆ ನಡೆಯುತ್ತಿದ್ದು, ಯಶಸ್ವಿಯಾಗಿ ಸಾಗುತ್ತಿದೆ.

ಪಂಚರತ್ನ ರಥಯಾತ್ರೆಯನ್ನು ತುಮಕೂರು ಕ್ಷೇತ್ರದಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸೋಮವಾರದಂದು ತುಮಕೂರು ನಗರದ ಜೆಡಿಎಸ್‌ ಪಕ್ಷದ ಕಛೇರಿಯಲ್ಲಿ ಅಲ್ಲಿನ ಜೆಡಿಎಸ್‌ ಮುಖಂಡರು ಪೂರ್ವಭಾವಿ ಸಭೆ ನಡೆಸಿದ್ದಾರೆ.

ಇಂದು ನಡೆದ ಈ ಪೂರ್ವಭಾವಿ ಸಭೆಯಲ್ಲಿ ತುಮಕೂರು ಜಿಲ್ಲಾ ಅಧ್ಯಕ್ಷರಾದ ಆಂಜಿನಪ್ಪ, ನಗರದ ಅಧ್ಯಕ್ಷರಾದ ವಿಜಯ್‌ ಗೌಡ್ರು ಸೇರಿದಂತೆ ಜೆಡಿಎಸ್‌ ಪಕ್ಷದ ಹಲವು ನಾಯಕರು ಉಪಸ್ಥಿತರಿದ್ದರು.

You cannot copy content of this page

Exit mobile version