Home ಬ್ರೇಕಿಂಗ್ ಸುದ್ದಿ ಫೋಕ್ಸೋ ಪ್ರಕರಣ: ಮುರುಘಾ ಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ಸೆಪ್ಟಂಬರ್‌ 2 ಕ್ಕೆ ಮುಂದೂಡಿಕೆ

ಫೋಕ್ಸೋ ಪ್ರಕರಣ: ಮುರುಘಾ ಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ಸೆಪ್ಟಂಬರ್‌ 2 ಕ್ಕೆ ಮುಂದೂಡಿಕೆ

0

ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಹಿನ್ನೆಲೆಯಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಿ ವಿಚಾರಣೆಯನ್ನು ನಾಳೆಗೆ (ಸೆ.2) ಮುಂದೂಡಲಾಗಿದೆ.

ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದೂರು ದಾಖಲಾಗಿತ್ತು. ಮುರುಘಾ ಶರಣರ ಪರವಾಗಿ ವಕೀಲ ಕೆ.ಎನ್.‌ವಿಶ್ವನಾಥಯ್ಯ ಅವರು ಆಗಸ್ಟ್‌ 29 ಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.  

ಈ ಕುರಿತು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ತಕರಾರು ಸಲ್ಲಿಸಲು ಒಂದು ದಿನ ಕಾಲಾವಕಾಶ ಕೊಟ್ಟಿದ್ದು, ವಿಚಾರಣೆಯನ್ನು ಸೆಪ್ಟಂಬರ್‌ 2 ಕ್ಕೆ ಮುಂದೂಡಿದೆ.

You cannot copy content of this page

Exit mobile version