ಹೊಸದಿಲ್ಲಿ : ಇಂದು ದೆಹಲಿಯ ಮುನಿಸಿಪಲ್ ಕಾರ್ಪೋರೇಶನ್(MC̈D) ಚುನಾವಣೆ ನಡೆಯುತ್ತಿದ್ದು, ಕಸದ ಸಮಸ್ಯೆಯನ್ನೇ ಕೇಂದ್ರ ವಿಷಯವನ್ನಾಗಿಸಿಕೊಂಡು ಎಂಸಿಡಿ ವಿರುದ್ಧ ಎಎಪಿ ನೇರ ಹಣಾಹಣಿ ನಡೆಸಿದೆ. ಒಂದೆಡೆ ಬಿಜೆಪಿ ತನ್ನ ಆಳ್ವಿಕೆಯನ್ನು ವಿಸ್ತರಿಸುವ ವಿಶ್ವಾಸವನ್ನು ಹೊಂದಿದ್ದರೆ, ಕಾಂಗ್ರೆಸ್ ಕೆಲವು ನೆಲೆಗಳನ್ನು ಮರಳಿ ಗೆಲ್ಲುವ ಭರವಸೆ ಹೊಂದಿದೆ.
ಸುಮಾರು 1.5 ಕೋಟಿ ಜನರು 250 ವಾರ್ಡ್ಗಳಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದು, 2011 ರಲ್ಲಿ ಪ್ರದೇಶವಾರು ರಚನೆಯಾದ ಮೂರು ಎಂಸಿಡಿಯನ್ನು ಮರುಸಂಘಟಿಸಲಾಗಿದೆ ಮತ್ತು ಈ ವರ್ಷದ ಆರಂಭದಲ್ಲಿ ಬಿಜೆಪಿಯ ಕೊನೆಯ ಅವಧಿ ಮುಗಿದ ನಂತರ ವಾರ್ಡ್ಗಳನ್ನು ಮರುವಿನ್ಯಾಸಗೊಳಿಸಲಾಗಿದೆ.
ಬೆಳಗ್ಗೆ ಎಂಟು ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ಸಂಜೆ 5.30 ಮತಗಟ್ಟೆಯ ಮುಚ್ಚಲಾಗುತ್ತಿದ್ದು, ನಂತರ ಈಗಾಗಲೇ ಒಳಗೆ ಇರುವವರು ಮಾತ್ರ ಚಲಾಯಿಸಬಹುದಾಗಿದೆ. ದಿನನಿತ್ಯದ ಮೆಟ್ರೋ ರೈಲು ಸೇವೆಗಳು ಮುಂಜಾನೆ 4 ಗಂಟೆಗೆ ಪ್ರಾರಂಭವಾಗಿ ತಮ್ಮ ಸೇವಗಳನ್ನು ಆರಂಭಿಸಿವೆ.
1300 ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೂಲಕ ದೆಹಲಿಯ ಆಡಳಿತದ ಭಾಗಗಳನ್ನು ನಿಯಂತ್ರಿಸುವ ಎಎಪಿ ಮತ್ತು ಬಿಜೆಪಿ ಎಲ್ಲಾ ಸ್ಥಾನಗಳಿಗೂ ಹೋರಾಡುತ್ತಿವೆ. ಎಎಪಿ ಶುರುವಾದಾಗಿನಿಂದ ತನ್ನ ನೆಲೆಯನ್ನು ಮರಳಿ ಪಡೆಯಲು ಕಾಂಗ್ರೆಸ್ ಹೆಣಗಾಡುತ್ತಿದ್ದು, ತನ್ನ ಮೂವರು ಅಭ್ಯರ್ಥಿಗಳ ನಾಮಪತ್ರಗಳನ್ನು ತಾಂತ್ರಿಕತೆಯ ಆಧಾರದ ಮೇಲೆ ತಿರಸ್ಕರಿಸಿದ್ದರಿಂದ 247 ಸ್ಥಾನಗಳಲ್ಲಿ ಸ್ಪರ್ಧೆಗಿಳಿಯುತ್ತಿದೆ.
ಡಿಸೆಂಬರ್ 7 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ನಗರದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಅರವತ್ತೆಂಟು ಮಾದರಿ ಮತಗಟ್ಟೆಗಳು ಮತ್ತು ಹಲವು ಪಿಂಕ್ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.
ಉಪಮುಖ್ಯಮತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವಾರು ಎಎಪಿ ಸಚಿವರ ಮೇಲೆ ಬಿಜೆಪಿ ವಸತಿ ಭರವಸೆಗಳನ್ನು ನೀಡಿದ್ದಲ್ಲದೇ ಭ್ರಷ್ಟಾಚಾರದ ಆರೋಪಗಳನ್ನೂ ಸಹ ಹೊರಿಸಿದೆ. ಬಂಧಿತ ಸಚಿವ ಸತ್ಯೇಂದರ್ ಜೈನ್ ಅವರು ತಿಹಾರ್ ಜೈಲಿನಲ್ಲಿ ವಿಶೇಷವಾಗಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋಗಳು ಸಿಸಿಟಿವಿ ದೃಶ್ಯಗಳ ಮುಖಾಂತರ ಬಯಲಾಗಿದೆ. ಎಎಪಿ ಯನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಇದನ್ನೂ ಕೂಡ ಬಳಸಿಕೊಂಡಿದೆ.
ಕಳೆದ 24 ವರ್ಷಗಳಲ್ಲಿ ಬಿಜೆಪಿ ದೆಹಲಿ ರಾಜ್ಯ ಸರ್ಕಾರವನ್ನು ರಚಿಸದಿದ್ದರೂ, ಕಾಂಗ್ರೆಸ್ ಮತ್ತು ಎಎಪಿಯ ರಾಜ್ಯ ಸರ್ಕಾರಗಳ ಮೂಲಕ ಎಂಸಿಡಿಯ ಮೇಲೆ ಅದರ ನಿಯಂತ್ರಣವು ಬಲವಾಗಿ ಇಟ್ಟುಕೊಂಡಿದೆ. 2015 ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ದಾಖಲೆಯ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿವೆ. ಆ ನಂತರವೂ ಎರಡು ವರ್ಷಗಳಾದ ಬಳಿಕ, ಬಿಜೆಪಿ ತನ್ನ 272 ಸ್ಥಾನಗಳಲ್ಲಿ 181 ಸ್ಥಾನಗಳನ್ನು ಗೆಲ್ಲುವ ಮೂಲಕ ನಾಗರಿಕ ಸಂಸ್ಥೆಯನ್ನು ಉಳಿಸಿಕೊಂಡಿದೆ. ಎಎಪಿ 48 ಮತ್ತು ಕಾಂಗ್ರೆಸ್ 30 ಸ್ಥಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಆಮ್ ಆದ್ಮಿ ಪಕ್ಷವು ಕಳೆದ ವರ್ಷದ ಆರಂಭದಿಂದಲೇ ತಯಾರಿ ನಡೆಸಿದ್ದು. ಕಸದ ಸಮಸ್ಯೆಯನ್ನೇ ತನ್ನ ಕೇಂದ್ರ ವಿಷಯವನ್ನಾಗಿ ಇಟ್ಟುಕೊಂಡಿದೆ. ಎಎಪಿ ನೈರ್ಮಲ್ಯದ ಬಗ್ಗೆಯೂ ಗಮನ ಕಾಳಜಿ ವಹಿಸೋಣ ಎಂದು ʼಕೇಜ್ರೀವಾಲ್ ಸರ್ಕಾರ, ಕೇಜ್ರೀವಾಲ್ ಕಾರ್ಪೋರೇಟರ್ʼ ಎಂದು ಘೋಷಣೆಗಳನ್ನು ಕೂಗಿತ್ತಿದ್ದು, ಬಿಜೆಪಿಯು ಅದೇ ರೀತಿ ಮೋದಿಯ ʼಡಬಲ್ ಇಂಜಿನ್ ಸರ್ಕಾರʼ ಎಂಬ ಘೋಷಣೆಯಿಂದ ಎಎಪಿಗೆ ಪ್ರತಿಸ್ಫರ್ಧಿಯಾಗಿದೆ.