ಹಾಸನ : ಈಗಾಗಲೇ ಭಾರತದ ದೇಶದ ಸೈನಿಕರು ಶತ್ರುಗಳೊಂದಿಗೆ ಹೋರಾಡುತ್ತಿದ್ದು, ನಮ್ಮ ಮತ್ತು ದೇಶದ ರಕ್ಷಣೆಯಲ್ಲಿರುವ ನಮ್ಮ ದೇಶದ ವೀರಯೋಧರಿಗೆ ಆ ದೇವರು ಶಕ್ತಿ ಮತ್ತು ಉತ್ತಮ ಆರೋಗ್ಯ ಕರುಣಿಸಲೆಂದು ಶುಕ್ರವಾರದಂದು ಮದ್ಯಾಹ್ನ ನಗರದಲ್ಲಿ ನಡೆದ ನಮಾಜ್ ನಲ್ಲಿ ಖುಬಾ ಮಸೀದಿಯ ಇಮಾಮ್ ಅಬ್ದುಲ್ ಕಲಾಂ ಅನ್ಸಾರಿಯವರು ಸಾಮೂಹಿಕವಾಗಿ ಪ್ರಾರ್ಥಿಸಿದರು.
ಪ್ರತಿ ವಾರ ಸಲ್ಲಿಸುವ ಮುಸ್ಲಿಣಂ ಬಾಂಧವರ ಸಾಮೂಹಿಕ ನಮಾಜ್ ನಲ್ಲಿ ಈ ಶುಕ್ರವಾರದಂದು ಎರಡು ದೇಶಗಳ ನಡುವಿನ ಯುದ್ಧದಲ್ಲಿ ಭಾರತೀಯ ಸೈನಿಕರಿಗೆ ಶಕ್ತಿ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಕೆ ಮಾಡಲಾಗಿದೆ.