ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಿಜೆಪಿಯ ಶಾಸಕರು ಮತ್ತು ಸಚಿವರುಗಳು ಭಾಗಿಯಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ʼವಿಧಾನಸೌಧದಲ್ಲಿರುವ ಬಿಜೆಪಿಯ ಶಾಸಕರು ಮತ್ತು ಸಚಿವರುಗಳ ನಡುವೆಯೇ ಪಿಎಸ್ಐ ಮೂಲ ಹಗರಣ ಇರುವುದು ಎಂದು ಹೇಳಿದೆ. ಬಿಜೆಪಿಯ ಶಾಸಕ ಬಸವರಾಜ್ ದಡೇಸಗೂರ ಅವರು ಅಭ್ಯರ್ಥಿಯ ಬಳಿ 15 ಲಕ್ಷ ಹಣ ಪಡೆದಿರುವುದು ಬೆಳಕಿಗೆ ಬಂದಿದ್ದು, ಈ ಅಕ್ರಮದಲ್ಲಿ ಇಡೀ ಬಿಜೆಪಿ ಸೇರಿದೆ. ಬಸವರಾಜ ಬೊಮ್ಮಾಯಿ ಅವರೇ ತನಿಖೆ ವಿಸ್ತರಿಸಿ ಶಾಸಕರನ್ನು ಬಂದಿಸುವುದು ಯಾವಾಗʼ ಎಂದು ಕಟುವಾಗಿ ಪ್ರಶ್ನಿಸಿದೆ.