Home ರಾಜ್ಯ ಹಾಸನ ಆರ್.ಅಶೋಕ್ ಗೆ ಭವಿಷ್ಯ ನುಡಿಯುವುದೇ ಕೆಲಸ – ಯತೀಂದ್ರ ಸಿದ್ದರಾಮಯ್ಯ ಕೌಂಟರ್

ಆರ್.ಅಶೋಕ್ ಗೆ ಭವಿಷ್ಯ ನುಡಿಯುವುದೇ ಕೆಲಸ – ಯತೀಂದ್ರ ಸಿದ್ದರಾಮಯ್ಯ ಕೌಂಟರ್

ಹಾಸನ: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಆಂತರಿಕ ಕಿತ್ತಾಟ ಹೆಚ್ಚಾಗಿದ್ದು ಪರಸ್ಪರ ರಾಜಕೀಯ ಕೆಸರೆರಚಾಟ ಜೋರಾಗಿದೆ.ಈ ಮಧ್ಯೆ ವಿಪಕ್ಷ ನಾಯಕ ಆರ್ ಅಶೋಕ್ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭವಿಷ್ಯ ನುಡಿಯುತ್ತಲೇ ಇದ್ದಾರೆ.

ಈ ಬಗ್ಗೆ ಹಸದಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ,ಕಳೆದ ಒಂದು ವರ್ಷದಿಂದಲು ಬಿಜೆಪಿ ಮತ್ತು ಆರ್ ಅಶೋಕ್ ಇದನ್ನೇ ಹೇಳುತ್ತಿದ್ದಾರೆ,ಆದ್ರೆ ಕಾಂಗ್ರೆಸ್ ನಲ್ಲಿ ಆ ರೀತಿಯ ಯಾವ ಬೆಳವಣಿಗಳು ಇಲ್ಲ. ಹೀಗಾಗಿ ಆರ್ ಅಶೋಕ್ ಕೇವಲ ಭವಿಷ್ಯ ನುಡಿಯೋದನ್ನೇ ಕಾಯಕ ಮಾಡಿಕೊಳ್ಳಬೇಕು ಅಷ್ಟೇ ಹೊರತು ಅವರಿಂದ ಬೇರೇನೂ ಸಾಧ್ಯವಿಲ್ಲ ಎಂದು ಟೀಕಿಸಿದ್ದಾ.

ಇತ್ತೀಚೆಗೆ ತಿಂಗಳು ತಾರೀಕಿನ ಸಮೇತ ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಭವಿಷ್ಯ ನುಡಿದಿದ್ದ ಆರ್ ಅಶೋಕ್ ನವೆಂಬರ್ ೧೫ ರ ಡೆಡ್ ಲೈನ್ ನೀಡಿದ್ದರು. ಇದೀಗ ಅವರ ಈ ಹೇಳಿಕೆಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ.

You cannot copy content of this page

Exit mobile version