Home ರಾಜಕೀಯ ರೈತರಿಗೆ ನೀಡಿದ ಭರವಸೆ ಎಲ್ಲಿ? : ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ರೈತರಿಗೆ ನೀಡಿದ ಭರವಸೆ ಎಲ್ಲಿ? : ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

0

ಬೆಂಗಳೂರು: ಭಾರತೀಯ  ಜನತಾ  ಪಕ್ಷವು  ರೈತರ ಬೆಳೆ ಸಾಲಮನ್ನಾ  ಮಾಡುವುದಾಗಿ ಜನರಿಗೆ ಭರವಸೆ  ನೀಡಿತ್ತು, ಆದರೆ ಹೇಳಿದಂತೆ  ನಡೆದುಕೊಂಡಿದೆಯಾ? ಇದಕ್ಕೆ ಬಿಜೆಪಿ ಬಳಿ ಉತ್ತರವಿದೆಯಾ? ಎಂದು ವಿರೋಧ ಪಕ್ಷದ  ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕ ಬಿಜೆಪಿ ಸರ್ಕಾರ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಸ್ಥೆಗಳಿಂದ ₹1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದೆ. ಆದರೆ ಸಾಲ ಮನ್ನಾ ಮಾಡುವುದನ್ನು ಮರೆತು ಬಿಜೆಪಿ ಅನ್ನದಾತರಿಗೆ ಹೆಚ್ಚಿನ ಸಾಲದ ಹೊರೆ ಹಾಕಿದೆ. ಈ ಮೂಲಕ ಸರ್ಕಾರ ಬರವಸೆ ನೀಡಿದಂತೆ ನಡೆದುಕೊಂಡಿಲ್ಲ  ಎಂದು ಸರ್ಕಾರವನ್ನು ದೂರಿದ್ದಾರೆ.

‘ನಾವು ರೈತರ ಪರವಾಗಿ  ಬಿಜೆಪಿಯವರಿಗೆ ಕೇಳುತ್ತೇವೆ’, ಬಿಜೆಪಿ ಭರವಸೆಯಂತೆ ಬೆಳೆ ಸಾಲ ಮನ್ನಾ ಮಾಡುತ್ತದೆಯೇ?  ಇದಕ್ಕೆ ನಿಮ್ಮ ಬಳಿ ಉತ್ತರ ಇದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

You cannot copy content of this page

Exit mobile version