ಬೆಂಗಳೂರು: ಭಾರತೀಯ ಜನತಾ ಪಕ್ಷವು ರೈತರ ಬೆಳೆ ಸಾಲಮನ್ನಾ ಮಾಡುವುದಾಗಿ ಜನರಿಗೆ ಭರವಸೆ ನೀಡಿತ್ತು, ಆದರೆ ಹೇಳಿದಂತೆ ನಡೆದುಕೊಂಡಿದೆಯಾ? ಇದಕ್ಕೆ ಬಿಜೆಪಿ ಬಳಿ ಉತ್ತರವಿದೆಯಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕ ಬಿಜೆಪಿ ಸರ್ಕಾರ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳು ಮತ್ತು ಸಹಕಾರಿ ಸಂಸ್ಥೆಗಳಿಂದ ₹1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದೆ. ಆದರೆ ಸಾಲ ಮನ್ನಾ ಮಾಡುವುದನ್ನು ಮರೆತು ಬಿಜೆಪಿ ಅನ್ನದಾತರಿಗೆ ಹೆಚ್ಚಿನ ಸಾಲದ ಹೊರೆ ಹಾಕಿದೆ. ಈ ಮೂಲಕ ಸರ್ಕಾರ ಬರವಸೆ ನೀಡಿದಂತೆ ನಡೆದುಕೊಂಡಿಲ್ಲ ಎಂದು ಸರ್ಕಾರವನ್ನು ದೂರಿದ್ದಾರೆ.
‘ನಾವು ರೈತರ ಪರವಾಗಿ ಬಿಜೆಪಿಯವರಿಗೆ ಕೇಳುತ್ತೇವೆ’, ಬಿಜೆಪಿ ಭರವಸೆಯಂತೆ ಬೆಳೆ ಸಾಲ ಮನ್ನಾ ಮಾಡುತ್ತದೆಯೇ? ಇದಕ್ಕೆ ನಿಮ್ಮ ಬಳಿ ಉತ್ತರ ಇದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.