ರಾಮನಗರ : ರಾಜ್ಯದಲ್ಲಿ ಜಾನುವಾರಗಳಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಚರ್ಮಗಂಟುರೋಗದಿಂದ ರಾಮನಗರದ ನಡೆಯಬೇಕಾಗಿದ್ದ ಜಾನುವಾರುಗಳ ಜಾತ್ರೆಯನ್ನು ಒಂದು ತಿಂಗಳ ಕಾಲ ನಿಷೇದ ಮಾಡಲಾಗಿದೆ.
ರಾಜ್ಯಾದ್ಯಂತ ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡುವಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜಾನುವಾರುಗಳು ಈ ಕಾಯಿಲೆಗೆ ತುತ್ತಾಗಿ ಬಲಿಯಾಗುತ್ತಲೇ ಇವೆ. ಈ ಸಲುವಾಗಿ ರಾಮನಗರದಲ್ಲಿ ಮಾರಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಕ್ಟೋಬರ್ 11 ರಂದು ನಡೆಯಬೇಕಿದ್ದ ಹಸುಗಳ ಜಾತ್ರೆಯನ್ನು ಮತ್ತು ಜಾನುವಾರು ಸಾಗಾಣಿಕೆಯನ್ನು ನವೆಂಬರ್ 10 ರವರೆಗೆ ನಿಷೇದ ಮಾಡಲಾಗಿದೆ ಎಂದು ರಾಮನಗರದ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಆದೇಶ ನೀಡಿದ್ದಾರೆ.