Home ಬೆಂಗಳೂರು ಪೌರಕಾರ್ಮಿಕರಿಗೆ ಬೆಂಗಳೂರಲ್ಲಿ ತಲೆ ಎತ್ತಲಿದೆ ವಿಶ್ರಾಂತಿ ಕೊಠಡಿಗಳು

ಪೌರಕಾರ್ಮಿಕರಿಗೆ ಬೆಂಗಳೂರಲ್ಲಿ ತಲೆ ಎತ್ತಲಿದೆ ವಿಶ್ರಾಂತಿ ಕೊಠಡಿಗಳು

ಬೆಂಗಳೂರು: ಸಿಲಿಕಾನ್ ಸಿಟಿ ಜಗತ್ತಿನಾದ್ಯಂತ ಹೆಸರು ಗಳಿಸಿದೆ, ಐಟಿ ತವರು ಎಂಬ ಕೀರ್ತಿ ಕೂಡ ನಮ್ಮ ಬೆಂಗಳೂರು ನಗರಕ್ಕೆ ಇದೆ. ನಮ್ಮ ಹೆಮ್ಮೆಯ ಬೆಂಗಳೂರನ್ನು ಇಷ್ಟು ಕ್ಲೀನ್ & ನೀಟ್ ಆಗಿ ಇಡಲು ಕಾರಣ ಆಗಿರುವುದು ಪೌರಕಾರ್ಮಿಕರು. ಇದೇ ಪೌರಕಾರ್ಮಿಕರಿಗಾಗಿ ಇದೀಗ ಭರ್ಜರಿ ಸುದ್ದಿಯೊಂದು ಸರ್ಕಾರದ ಕಡೆಯಿಂದ ಸಿಕ್ಕಿದೆ.

ಬೇಸಿಗೆ ಆರಂಭಕ್ಕೂ ಮೊದಲೇ ಬಿಬಿಎಂಪಿ ಕೈಗೊಂಡಿರುವ ಕ್ರಮ ಸಾಕಷ್ಟು ಮೆಚ್ಚುಗೆಗೂ ಪಾತ್ರವಾಗಿದೆ. ಈ ಬಾರಿ ಅತಿಹೆಚ್ಚು ಬಿಸಿಲು ಬೆಂಗಳೂರಿಗೆ ಬಂದು ಎರಗುವ ಮುನ್ಸೂಚನೆ ಇದ್ದು, ಪೌರಕಾರ್ಮಿಕರು ತಮ್ಮ ಕೆಲಸದ ನಡುವೆ ಆಯಾಸವಾದರೆ ವಿಶ್ರಾಂತಿ ಪಡೆಯಲು ಅನುಕೂಲ ಆಗಲಿದೆ. ಅಲ್ಲದೆ ಈ ಕೊಠಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಈಗ 42 ಸ್ಥಳಗಳಲ್ಲಿ ಶಾಶ್ವತ ಕೊಠಡಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಆದಷ್ಟು ಬೇಗನೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರು ವಿಶ್ರಾಂತಿ ಪಡೆಯಲು ಶಾಶ್ವತ ಕೊಠಡಿ ನಿರ್ಮಾಣ ಮಾಡಿ ಎಂದಿದ್ದಾರೆ.

You cannot copy content of this page

Exit mobile version