ಬೆಂಗಳೂರು : ಸೆಪ್ಟಂಬರ್ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ದಿನವಾಗಿದೆ. ಈ ಅಂಗವಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಭಾರತದಾದ್ಯಂತ ಬಿಜೆಪಿ ವತಿಯಿಂದ ʼಸೇವಾ ಪಾಕ್ಷಿಕʼ ದ ವಿವಿಧ ಕಾರ್ಯಕ್ರಮಗಳು ಆಯೋಜನೆಗಳನ್ನು ಏರ್ಪಡಿಸಿದ್ದಾರೆ.
ಕಾರ್ಯಕ್ರಮಗಳು ಈ ಕೆಳಗಿನಂತಿವೆ:
ಪ್ರತಿ ಜಿಲ್ಲೆಗಳಲಿ
- ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ.
- ದಿವ್ಯಾಂಗರಿಗೆ ಕೃತಕ ಅಂಗ ಅಥವಾ ಉಪಕರಣಗಳ ವಿತರಣೆ.
- ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಸೇವಾ ಕಾರ್ಯ.
- ಬೂತ್ಗಳಲ್ಲಿ ವನಮಹೋತ್ಸವ ಕಾರ್ಯಕ್ರಮ.
- ಜಿಲ್ಲಾ ಮಂಡಲಗಳಲ್ಲಿ ಎರಡು ದಿನಗಳ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ.
- ʼಜಲವೇ ಜೀವನʼ ಜಾಗೃತಿ ಅಭಿಯಾನ ಕಾರ್ಯಕ್ರಮ.
- ವೋಕಲ್ ಫಾರ್ ಲೋಕಲ್ಗೆ ಉತ್ತೇಜನ ನೀಡಲು ಜನಜಾಗೃತಿ ಅಭಿಯಾನ.
- 2025 ರ ವೇಳೆಗೆ ಟಿಬಿ ಮುಕ್ತ ಭಾರತ ಗುರಿಯೊಂದಿಗೆ, ವರ್ಷದೊಳಗೆ ರೋಗಿಗಳ ಆಹಾರ, ಪೋಷಣೆ ಮತ್ತು ಜೀವನೋಪಾಯಕ್ಕೆ ಸಂಭಂದಿಸಿದ ಸೇವಾ ಕಾರ್ಯಗಳು.
- ʼಭಾರತದ ವಿವಿಧತೆಯಲ್ಲಿ ಏಕತೆʼಯ ಉತ್ಸವ ಆಯೋಜಿಸಿ ʼಏಕ್ ಭಾರತ್, ಶ್ರೇಷ್ಠ ಭಾರತ್ʼ ಸಂದೇಶವನ್ನು ಸಮಾಜಕ್ಕೆ ನೀಡಲಾಗುವುದು.
ಎಂದು ರಾಜ್ಯ ಬಿಜೆಪಿ ಟ್ವೀಟ್ ಮುಖಾಂತರ ಜನತೆಗೆ ತಿಳಿಸಿದೆ.