ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿಯ ಜೊತೆ ಕಾಂಗ್ರೆಸ್ನ ಅಧಿನಾಯಕಿ ಸೋನಿಯಾ ಗಾಂಧಿಯವರು ಹೆಜ್ಜೆ ಹಾಕಿರುವುದು ಯಾತ್ರೆಗೆ ಮತ್ತಷ್ಟು ಬಲ ಬರುವಂತೆ ಮಾಡಿದ್ದಾರೆ.
ಸೋನಿಯಾ ಗಾಂಧಿಯವರು ಭಾರತ ಐಕ್ಯತಾ ಯಾತ್ರೆಗೆ ಸಾಥ್ ನೀಡುವುದಕ್ಕಾಗಿ ಕರ್ನಾಟಕಕ್ಕೆ ಬಂದು ಇಂದು ಮಂಡ್ಯದಲ್ಲಿ ನಡೆಯುತ್ತಿರುವ ಬೃಹತ್ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ಜೊತೆ ಪಾಲ್ಗೊಂಡಿರುವುದು ಕಾಂಗ್ರೆಸ್ ಘಟಕದವರಿಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕವು ʼ”ಐತಿಹಾಸಿಕ ಕ್ಷಣ” ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಹೆಜ್ಜೆ ಹಾಕಿದರು. ಭವ್ಯ ಭಾರತದೆಡೆಗೆ ಅವರಿಗಿರುವ ಪ್ರೀತಿ, ಅಭಿಮಾನ, ಬದ್ಧತೆಗಳಿಗೆ ವಯಸ್ಸು, ಆಯಾಸ, ಅನಾರೋಗ್ಯ ಯಾವುದೂ ಅಡ್ಡಿಯಾಗುವುದಿಲ್ಲ. ಅನಾರೋಗ್ಯದಲ್ಲೂ ಅವರ ಈ ಉತ್ಸಾಹವು ಎಲ್ಲರಿಗೂ ಪ್ರೇರಕ ಶಕ್ತಿಯಾಗಿದೆ.ʼ ಎಂದು ಸೋನಿಯಾ ಗಾಂಧಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
“ಸೋನಿಯಾ ಗಾಂಧಿಯವರ ಈ ಪ್ರತಿ ಹೆಜ್ಜೆಗಳಲ್ಲೂ ದೃಢತೆ ಇದೆ, ವಿಶ್ವಾಸವಿದೆ, ತಾಳ್ಮೆ ಇದೆ, ಛಲವಿದೆ, ಬದ್ಧತೆ ಇದೆ, ಸ್ಪಷ್ಟತೆ ಇದೆ, ತ್ಯಾಗವಿದೆ, ವಾತ್ಸಲ್ಯವಿದೆ, ಕರುಣೆ ಇದೆ, ತಾಯ್ತನದ ಮಮತೆ ಇದೆ, ದೇಶದೆಡೆಗೆ ಅಪರಿಮಿತ ಪ್ರೇಮವಿದೆ, ಅವಮಾನಗಳನ್ನು ಸಹಿಸುವ ಪ್ರಬುದ್ಧತೆ ಇದೆ” ಎಂದು ಸೋನಿಯಾ ಗಾಂಧಿಯವರ ಘನತೆಯ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.
🔸 ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo
ಇದನ್ನೂ ನೋಡಿ: ಕಾಂತಾರ: ಸಂಘರ್ಷಗಳ ಕುಲುಮೆಯಲ್ಲಿ ದೈವದ ಪ್ರೇಮದ ಹೆಜ್ಜೆಗಳ ಘಲ್ ಘಲ್ ಸದ್ದು!