Home ರಾಜಕೀಯ ಸ್ವ ಪಕ್ಷದವರನ್ನು ಟೀಕಿಸಿದ್ದ ಕೃಷಿ ಸಚಿವ : ದಿಢೀರ್‌ ರಾಜೀನಾಮೆ

ಸ್ವ ಪಕ್ಷದವರನ್ನು ಟೀಕಿಸಿದ್ದ ಕೃಷಿ ಸಚಿವ : ದಿಢೀರ್‌ ರಾಜೀನಾಮೆ

0

ಬಿಹಾರ : ಬಿಹಾರದ ಮುಖ್ಯಮಂತ್ರಿಗಳಾದ ನಿತೀಶ್‌ ಕುಮಾರ್‌ ಅವರನ್ನು ಸ್ವತಃ  ಅಲ್ಲಿನ ಕೃಷಿ ಸಚಿವ ಸುಧಾಕರ್‌ ಸಿಂಗ್‌ ಅವರೇ ಟೀಕಿಸುತ್ತಾ ಬಂದಿದ್ದು ಸಚಿವ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ.

ಸದಾ ರೈತರ ಪರ ನಿಲ್ಲುತ್ತಿದ್ದ ಕೃಷಿ ಸಚಿವ ಸುಧಾಕರ್‌ ಸಿಂಗ್‌, ತಮ್ಮದೇ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ನೋಡಿ ಸಹಿಸಲಾಗದೆ ಸದಾ ಬಿಹಾರದ ಮೈತ್ರಿ ಸರ್ಕಾರದ ವಿರುದ್ದ ಟೀಕಿಸುತ್ತಲೇ ಬಂದಿದ್ದರಿಂದ ಬಿಹಾರದ ಸರ್ಕಾರ ಮುಜುಗರಕ್ಕೆ ಒಳಪಟ್ಟಿತ್ತು.

ಈ ಬೆನ್ನಲ್ಲೇ ಶನಿವಾರದಂದು ಕೃಷಿ ಸಚಿವ ಸುಧಾಕರ್‌ ಸಿಂಗ್‌ ರಾಜೀನಾಮೆ ನೀಡುವಂತೆ ನಿರ್ಧಾರ ಮಾಡಿದ್ದಾರೆ. ಈ ಕುರಿತು ಇಂದು ಮಾತನಾಡಿದ ಅವರ ತಂದೆಯಾದ ಆರ್‌ಜೆಡಿಯ ರಾಜ್ಯ ಘಟಕದ ಅಧ್ಯಕ್ಷ ಜಗದಾನಂದ್‌ ಸಿಂಗ್‌ ಅವರು ʼಬಿಹಾರ ಸರ್ಕಾರದ ಮೈತ್ರಿಯಲ್ಲಿನ ಬಿರುಕು ತಡೆಯಲು ರಾಜೀನಾಮೆ ನೀಡಿದ್ದಾರೆʼ ಎಂದು ಖಚಿತ ಪಡಿಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಗಾಂಧಿ ತಾತನಿಗೆ, ಸಬರಮತಿಯಿಂದ ಸೇವಾಗ್ರಾಮದವರೆಗೆ
ತಲೆ ಬಾಗುವೆನು ನೀ ಬೆಳೆದ ಪರಿಗೆ
ನಿನ್ನೊಳಗೆ ನನ್ನಪ್ಪ ಬಿತ್ತಿದ
ಶತಮಾನದ ಅರಿವಿಗೆ…ಪೀಪಲ್‌ ಮೀಡಿಯಾ , ವಿಕಾಸ್ ಆರ್ ಮೌರ್ಯ

You cannot copy content of this page

Exit mobile version