Home ಆಟೋಟ ಟಿ-20 ವಿಶ್ವಕಪ್‌: ಭಾರತಕ್ಕೆ ಗೆಲ್ಲಲ್ಲೇಬೇಕಾದ ಅನಿವಾರ್ಯತೆ

ಟಿ-20 ವಿಶ್ವಕಪ್‌: ಭಾರತಕ್ಕೆ ಗೆಲ್ಲಲ್ಲೇಬೇಕಾದ ಅನಿವಾರ್ಯತೆ

0

ಅಡಿಲೇಡ್ ಓವಲ್: ಇಂದು ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ಸೆಣಸಾಡುತ್ತಿದ್ದು, ಎರಡು ತಂಡಗಳಿಗೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.

ಗ್ರೂಪ್‌ ಎರಡರಲ್ಲಿರುವ ಭಾರತ ತಂಡ ಮೂರು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಅದೇರೀತಿ ಬಾಂಗ್ಲದೇಶವು ಕೂಡ, ಎರಡರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಹೀಗಾಗಿ ಎರೆಡು ತಂಡಗಳು ಸಮಬಲ ಸಾಧಿಸಿದ್ದು, ಭಾರತ ತಂಡವು ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನವನ್ನು ಬಾಂಗ್ಲಾದೇಶ ಪಡೆದುಕೊಂಡಿದೆ.

ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆಯೋ, ಆ ತಂಡ ಸೆಮಿಪೈನಲ್‌ಗೆ ತಲುಪುವ ಕನಸನ್ನು ಒಂದು ಮಟ್ಟಿಗೆ ನನಸು ಮಾಡಿಕೊಳ್ಳಬಹುದಾದ ಅವಕಾಶ ಇದೆ. ಈ ಹಿನ್ನಲೆಯಲ್ಲಿ ಎರೆಡು ತಂಡಗಳು ಮುಂಬರುವ ಎರಡು ಪಂದ್ಯಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸೂಪರ್‌ 12 ಪಂದ್ಯಕ್ಕೆ ಮಳೆರಾಯನ ಆತಂಕ

ಇಂದು ಅಡಿಲೇಡ್ ಓವಲ್ ಭಾಗದಲ್ಲಿ ಶೇ,60 ರಷ್ಟು ಮಳೆ ಬೀಳುವ ಸಂಭವವಿದ್ದು, ಹೆಚ್ಚಾಗಿ ಸಂಜೆ. ನೈಋತ್ಯ ದಿಕ್ಕಿಗೆ 20 ರಿಂದ 30 ಕಿ.ಮೀ/ಗಂಟೆ ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತಿಳಿಸಿದೆ.

You cannot copy content of this page

Exit mobile version