Friday, June 20, 2025

ಸತ್ಯ | ನ್ಯಾಯ |ಧರ್ಮ

ಟಿಪ್ಪು ಸುಲ್ತಾನ್‌ನನ್ನು ಮುಸ್ಲಿಂ ಗೂಂಡಾ ಎಂದು ಕರೆದ ಈಶ್ವರಪ್ಪಗೆ ಬೆದರಿಕೆ ಪತ್ರ

ಶಿವಮೊಗ್ಗ: ಟಿಪ್ಪು ಸುಲ್ತಾನ್‌ನನ್ನು ಮತ್ತೊಮ್ಮೆ ʼಮುಸ್ಲಿಂ ಗೂಂಡಾʼ ಎಂದು ಕರೆದರೆ ನಾಲಿಗೆ ಕತ್ತಿರುಸುವುದಾಗಿ ಬೆದರಿಕೆ ಪತ್ರ ಬಂದಿದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪನವರು ಪೋಲಿಸರಿಗೆ ದೂರು ನೀಡಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪನವರು, ನಾನು ಎಲ್ಲಾ ಮುಸ್ಲಿಂಮರನ್ನು ಗೂಂಡಾ ಎಂದು ಎಂದಿಗೂ ಕರೆದಿಲ್ಲ. ಈ ರೀತಿಯ ಬೆದರಿಕೆ ಪತ್ರಗಳಿಗೆ ನಾನು ಹೆದರುವುದಿಲ್ಲ ಎಂದು ಹೇಳಿದರು.

ನಗರದಲ್ಲಿ ಆಗಸ್ಟ್‌ 15 ರಂದು ನಡೆದ ಸಾರ್ವಕರ್‌ ಫ್ಲೇಕ್ಸ್‌ ವಿಚಾರ ರಾಜ್ಯಾದದ್ಯಾಂತ ಗದ್ದಲಕ್ಕೆ ಕಾರಣವಾಗಿತ್ತು. ಈ ವಿಚಾರವನ್ನು ಕುರಿತು ʼನಾನು ಎಲ್ಲಾ ಮುಸ್ಲಿಮರನ್ನು ಗುಂಡಾಗಳು ಎಂದಿಲ್ಲ, ಮುಸ್ಲಿಂ ಸಮುದಾಯದ ಹಿರಿಯರು ಈ ಹಿಂದೆ ಶಾಂತಿ, ಸೌಹಾರ್ದಕ್ಕಾಗಿ ಪ್ರಯತ್ನಗಳನ್ನು ಮಾಡಿದ್ದಾರೆ ಆದರೆ ಗೂಂಡಾಯಿಸಂನಲ್ಲಿ ತೊಡಗಿರುವ ಯುವಕರಿಗೆ ಎಚ್ಚರ ನೀಡಲು ಬಯಸುತ್ತೇನೆ. ಇಲ್ಲದಿದ್ದಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಮತ್ತು ಅದನ್ನು ಎದುರಿಸಲು ಸಿದ್ಧರಾಗಿರಬೇಕುʼ ಎಂದು ಈಶ್ವರಪ್ಪನವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page