ಶಿವಮೊಗ್ಗ: ಟಿಪ್ಪು ಸುಲ್ತಾನ್ನನ್ನು ಮತ್ತೊಮ್ಮೆ ʼಮುಸ್ಲಿಂ ಗೂಂಡಾʼ ಎಂದು ಕರೆದರೆ ನಾಲಿಗೆ ಕತ್ತಿರುಸುವುದಾಗಿ ಬೆದರಿಕೆ ಪತ್ರ ಬಂದಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪನವರು ಪೋಲಿಸರಿಗೆ ದೂರು ನೀಡಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪನವರು, ನಾನು ಎಲ್ಲಾ ಮುಸ್ಲಿಂಮರನ್ನು ಗೂಂಡಾ ಎಂದು ಎಂದಿಗೂ ಕರೆದಿಲ್ಲ. ಈ ರೀತಿಯ ಬೆದರಿಕೆ ಪತ್ರಗಳಿಗೆ ನಾನು ಹೆದರುವುದಿಲ್ಲ ಎಂದು ಹೇಳಿದರು.
ನಗರದಲ್ಲಿ ಆಗಸ್ಟ್ 15 ರಂದು ನಡೆದ ಸಾರ್ವಕರ್ ಫ್ಲೇಕ್ಸ್ ವಿಚಾರ ರಾಜ್ಯಾದದ್ಯಾಂತ ಗದ್ದಲಕ್ಕೆ ಕಾರಣವಾಗಿತ್ತು. ಈ ವಿಚಾರವನ್ನು ಕುರಿತು ʼನಾನು ಎಲ್ಲಾ ಮುಸ್ಲಿಮರನ್ನು ಗುಂಡಾಗಳು ಎಂದಿಲ್ಲ, ಮುಸ್ಲಿಂ ಸಮುದಾಯದ ಹಿರಿಯರು ಈ ಹಿಂದೆ ಶಾಂತಿ, ಸೌಹಾರ್ದಕ್ಕಾಗಿ ಪ್ರಯತ್ನಗಳನ್ನು ಮಾಡಿದ್ದಾರೆ ಆದರೆ ಗೂಂಡಾಯಿಸಂನಲ್ಲಿ ತೊಡಗಿರುವ ಯುವಕರಿಗೆ ಎಚ್ಚರ ನೀಡಲು ಬಯಸುತ್ತೇನೆ. ಇಲ್ಲದಿದ್ದಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಮತ್ತು ಅದನ್ನು ಎದುರಿಸಲು ಸಿದ್ಧರಾಗಿರಬೇಕುʼ ಎಂದು ಈಶ್ವರಪ್ಪನವರು ಹೇಳಿದರು.