Home ಬ್ರೇಕಿಂಗ್ ಸುದ್ದಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಸನಾಂಬೆ ದರ್ಶನ ವೇಳೆ ಅಗೌರವ ಜೆಡಿಎಸ್ ಪ್ರತಿಭಟನೆ 

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಸನಾಂಬೆ ದರ್ಶನ ವೇಳೆ ಅಗೌರವ ಜೆಡಿಎಸ್ ಪ್ರತಿಭಟನೆ 

ಹಾಸನ: ಹಾಸನಾಂಬೆ ದರ್ಶನೋತ್ಸವದಲ್ಲಿ ಸ್ಥಳೀಯ ಶಾಸಕರನ್ನು ಕಡೆಗಣಿಸಿರುವುದು ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಗೌರವ ತೋರಿರುವುದನ್ನು ಖಂಡಿಸಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ನಗರಸಭೆ ಎದುರು ಜೆಡಿಎಸ್ ಕಾರ್ಯರ್ತರು ಭಾನುವಾರ ಪ್ರತಿಭಟನೆ ನಡೆಸಿದರು. ಶಾಸಕ ಸ್ವರುಪ್‌ ಪ್ರಕಾಶ್ ಮಾತನಾಡಿ, ಸಿಎಮ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗು ರಾಜ್ಯ ಸರ್ಕಾರದ ಸಚಿವ ಹಾಸಾನಂಬೆ ದರ್ಶನಕ್ಕೆ ಆಗಮಿಸಿದಾಗ ಅವರಿಗೆ ನೀಡಿದ ಗೌರವವನ್ನು ನಾವು ಪ್ರಶ್ನಿಸುವುದಿಲ್ಲ. ಅದರೆ ಕೇಂದ್ರ ಸಚಿವ ಎಚ್ಮಡಿ. ಕುಮಾರಸ್ವಾಮಿ ಅವರು ಬಂದಾಗ ಅವರಿಗೆ ಗೌರವ ನೀಡಲಿಲ್ಲ ಎಂದು ನಾವು ಪ್ರಶ್ನಿಸುತ್ತಿದ್ದೇವೆ.

ದೇವಸ್ಥಾನ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಎಚ್. ಡಿ. ಕುಮಾರಸ್ವಾಮಿ ಹಾಗು ಮಾಜಿ ಸಚಿವ ಎಚ್.ಡಿ. ರೇವಣ್ಣ ಕಾರಣ, ಅಲ್ಲದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಹಾಸನಾಂಬೆ ದೆವಾಲಯ ಜೀರ್ಣೋದ್ಧಾರಕ್ಕೆ ಎರಡು‌ಕೊಟಿ ಅನುದಾನ ನಿಡಿದ್ದಾರೆ. ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅಂಥವರಿಗೆ ಅಗೌರವ ತೋರುವುದನ್ನು ನಾವು ಸಹಿಸುವುದಿಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಹಾಸನಾಂಬ ದರ್ಶನೋತ್ಸವ ಪ್ರಯುಕ್ತ ನಡೆಯುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಶಾಸಕನಾದ ನನ್ನನ್ನು ಆಹ್ವಾನಿಸದೆ ಕಡೆಗಣಿಸಿದ್ದಾರೆ. ಜಿಲ್ಲಾಧಕಾರಿ ಸ್ಥಳಕ್ಕೆ ಆಗಮಿಸಿ ಬಹಿರಂಗ ಕ್ಷಮೆ ಕೋರಬೇಕು ಅಲ್ಲಿಯವರೆಗು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.

You cannot copy content of this page

Exit mobile version