ಬಳ್ಳಾರಿ: ಬಳ್ಳಾರಿಯಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯ ಭಾಗವಾಗಿ ನಡೆಯುತ್ತಿರುವ ಸಭೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬಿಜೆಪಿ ಮತ್ತು ಅದರ ನಾಯಕರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ 1925ರಿಂದ ಒಬ್ಬನೇ ಒಬ್ಬ ಸಂಘಪರಿವಾರದ ನಾಯಕ ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದರೆ ತೋರಿಸಲಿ ಎಂದರು. ಈ ಜಿಲ್ಲೆಯಲ್ಲೊಬ್ಬ ಮಂತ್ರಿಯಿದ್ದಾರೆ, ಅವರ ಹೆಸರು ಶ್ರೀರಾಮುಲು. ಅವರು ನೆಹರೂ ಏನು ಮಾಡಿದ್ದಾರೆ? ಇಂದಿರಾಗಾಂಧಿ ಏನು ಮಾಡಿದರು, ಸೋನಿಯಾ ಗಾಂಧಿ ಏನು ಮಾಡಿದ್ದರು ಎಂದು ಕೇಳುತ್ತಾರೆ. ಅವರಿಗೆ ಹೇಳಬೇಕಿದೆ ಬಳ್ಳಾರಿಯಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆಯನ್ನು ಯಾರು ತಂದರು? ಎಂದು ಅವರನ್ನ ಕೇಳೋದಕ್ಕೆ ಬಯಸುತ್ತೇನೆ. ಆ ಕಾರ್ಖಾನೆಯಿಂದಾಗಿ ಇಂದು ಸಾವಿರಾರು ಜನರು ಬದುಕುತ್ತಿದ್ದಾರೆ. ಅದಕ್ಕೆ ಕಾರಣ ಇಂದಿರಾ ಗಾಂಧಿ. ಕುಡಿತಿನಿ ವಿದ್ಯುತ್ ಯೋಜನೆ ತಂದವರು ಸೋನಿಯಾ ಗಾಂಧಿ. 3,300 ಕೋಟಿ ರೂ.ಗಳ ಯೋಜನೆ ತಂದವರು ಸೋನಿಯಾ ಗಾಂಧಿ. ಇಷ್ಟು ವರ್ಷಗಳಿಂದ ಮೋದಿ ಸರಕಾರ ಏನು ತಂದಿದೆ ಎನ್ನುವುದನ್ನು ಬಿಜೆಪಿ ವಿವರಿಸಲಿ ಎಂದರು.
ದೇಶದಲ್ಲಿ ಇಂದು ಎಲ್ಲೆಡೆ ಭಯದ ವಾತಾವರಣವಿದೆ. ಹಿಂದುತ್ವವಾದಿ ಸಂಘಟನೆಗಳು ಎಲ್ಲೆಡೆ ಭಯ ಹರಡುತ್ತಿವೆ ಎಂದು ಹೇಳಿದರು.