ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಮಾತ್ರ ಮಹಿಳೆಯರನ್ನು ಪರಿಗಣಿಸುತ್ತವೆ. ಸೀರೆ, ಕುಕ್ಕರ್ ಕೊಟ್ಟು ವೋಟ್ ಬ್ಯಾಂಕ್ ಆಗಿ ಮಹಿಳೆಯರನ್ನು ನಿರ್ಮಿಸಿಕೊಳ್ಳುವುದರಲ್ಲೇ ಸಂತೃಪ್ತಗೊಂಡಿವೆ. ಸಂವಿಧಾನದ ಆಶಯದಂತೆಯೇ ರಾಜಕೀಯದ ಚುಕ್ಕಾಣಿ ಹಿಡಿದ ಪಕ್ಷಗಳು ಅದರಂತೇ ಮಹಿಳೆಯರಿಗೆ ಅವರ ಪಾಲು ನೀಡುವತ್ತ ಸಮರ್ಥವಾದ ಹೆಜ್ಜೆ ಇಡಬೇಕಾದದ್ದು ನ್ಯಾಯ – ರೇಣುಕಾ ಹನ್ನುರ್, ಕಲಬುರಗಿ
ಹೆಣ್ಣು ಮಕ್ಕಳ ಧ್ವನಿಗೆ ಧ್ವನಿಯಾದವರು, ಹೆಣ್ಣು ಮಕ್ಕಳ ನೋವಿಗೆ ಮುಲಾಮು ಆದವರು ಬಾಬಾ ಸಾಹೇಬರು. ತಾಯಿಗರುಳ, ನಿಜವಾದ ಸ್ತ್ರೀವಾದಿ ಅಂಬೇಡ್ಕರವರು. ಮಹಿಳೆಯರ ಸ್ಥಾನ ಮಾನವನ್ನು ಭಾರತದಲ್ಲಿ ಮೇಲ್ಮಟ್ಟದಲ್ಲಿ ತರಲು ಅವಿರತವಾಗಿ ಶ್ರಮಿಸಿದವರು. ಹಿಂದು ಕೋಡ್ ಬಿಲ್ ಜಾರಿ ಮಾಡುವಲ್ಲಿ ಪ್ರಯತ್ನಿಸಿ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವವು ಹೆಚ್ಚಿದ್ದ ಕಾರಣ ಸೋತು ಬಿಟ್ಟರು. ಆ ಕಾರಣಕ್ಕೆ ಅವರು ಮಂತ್ರಿ ಪದವಿಯನ್ನು ತ್ಯಜಿಸುತ್ತಾರೆ. ತಾಯಿಯಾದವಳು ಇರುವ ಹತ್ತು ಮಕ್ಕಳಲ್ಲಿ ಕಪ್ಪು, ಬಿಳಪು ದಪ್ಪ, ಸಣ್ಣ ಎಂದು ಯಾವ ಮಗುವಿಗೂ ಯಾವ ರೀತಿಯಲ್ಲೂ ತಾರತಮ್ಯ ಮಾಡದೆ ಪ್ರೀತಿ ನೀಡಿ ಪೋಷಿಸುತ್ತಾಳೊ ಹಾಗೆಯೇ ಭಾರತದಲ್ಲಿ ಇರುವ ಎಲ್ಲಾ ಲಿಂಗ, ಜಾತಿ ವರ್ಗಗಳಿಗೆ ಸಮಾನವಾದ ಅವಕಾಶಗಳನ್ನು ಸಂವಿಧಾನದ ಮೂಲಕ ನೀಡಿದ್ದಾರೆ.
“ನನ್ನ ಪ್ರಕಾರ ಒಂದು ಸಮುದಾಯದ ಅಭಿವೃದ್ಧಿಯನ್ನು ಅಳೆಯಬೇಕಾದರೆ ಆ ಸಮುದಾಯದ ಮಹಿಳೆಯರ ಅಭಿವೃದ್ಧಿ ಯೇ ಪ್ರಮುಖ ದಾರಿದೀಪವಾಗಿದೆ” ಎಂದಿದ್ದಾರೆ ಬಾಬಾ ಸಾಹೇಬರು. ಅವರ ಈ ಆಶಯ ನುಡಿಯ ತಿರುಳು ಇಷ್ಟೇ- ಆಯಾ ಕುಟುಂಬ, ಆಯಾ ಸಮುದಾಯದ ಅಭಿವೃದ್ಧಿಯು ಆಯಾ ಕುಟುಂಬದಲ್ಲಿ ಮತ್ತು ಸಮುದಾಯದಲ್ಲಿ ಮಹಿಳೆಯರ ಪ್ರಾತಿನಿಧ್ಯತೆ ಎಷ್ಟಿದೆ? ಆ ಪಾಲು ನ್ಯಾಯವಾಗಿ ಮಹಿಳೆಗೆ ದೊರಕುತ್ತಿದೆಯೇ? ಎನ್ನುವುದು ಪ್ರಸ್ತುತ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಇದು ಚುನಾವಣೆಯ ಸಮಯ. ರಾಜ್ಯದ ರಾಜಕೀಯ ರಂಗದಲ್ಲಿ ಯಾವ ಯಾವ ಪಕ್ಷಗಳು ಎಲ್ಲಿ ಎಲ್ಲಿ ಎಷ್ಟು ಜನ ಮಹಿಳೆಯರಿಗೆ ಟಿಕೆಟ್ ನೀಡಿವೆ ಎನ್ನುವುದನ್ನು ಒರೆಗೆಹಚ್ಚಿ ನೋಡಿದಾಗ ನಿರಾಶೆ ಕಾಡುತ್ತದೆ. ಸದ್ಯದ ಆಡಳಿತ ಪಕ್ಷವೆ ಕೇವಲ ೧೨ ಜನ ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿದರೆ, ಕಾಂಗ್ರೆಸ್ ಪಕ್ಷ ಕೇವಲ ೧೧ ಜನ ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಿದೆ. ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಮಾತ್ರ ಮಹಿಳೆಯರನ್ನು ಪರಿಗಣಿಸುತ್ತವೆ. ಸೀರೆ, ಕುಕ್ಕರ್ ಕೊಟ್ಟು ವೋಟ್ ಬ್ಯಾಂಕ್ ಆಗಿ ಮಹಿಳೆಯರನ್ನು ನಿರ್ಮಿಸಿಕೊಳ್ಳುವುದರಲ್ಲೇ ಸಂತೃಪ್ತಗೊಂಡಿವೆ.
ಇದನ್ನೂ ಓದಿ-https://peepalmedia.com/failures-of-the-bjp-government-in-the-field-of-education/ http://ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರಕಾರದ ವೈಫಲ್ಯಗಳು
ಸಂವಿಧಾನದ ಆಶಯದಂತೆಯೇ ರಾಜಕೀಯದ ಚುಕ್ಕಾಣಿ ಹಿಡಿದ ಪಕ್ಷಗಳು ಸಂವಿಧಾನದ ಆಶಯದಂತೆ ಮಹಿಳೆಯರಿಗೆ ಅವರ ಪಾಲು ನೀಡುವತ್ತ ಸಮರ್ಥವಾದ ಹೆಜ್ಜೆ ಇಡಬೇಕಾದದ್ದು ನ್ಯಾಯ. ಸಮ ಸಮಾಜದ ತೇರು ಎಳೆಯುವಾಗ ಯಾರಿಗೂ ಅನ್ಯಾಯವಾಗದಂತೆ ಬಹು ಸೂಕ್ಷ್ಮತೆಯಿಂದ ಎಳೆದು ತರಬೇಕು. ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಚುನಾವಣೆಯಿಂದ ಚುನಾವಣೆಗೆ ಇಳಿಕೆಯಾಗುತ್ತಿರುವುದನ್ನು ನೋಡುವಾಗ ಬಾಬಾ ಸಾಹೇಬರ ಮಾತುಗಳು ಹೆಚ್ಚು ನೆನಪಾಗುತ್ತವೆ.
ಪ್ರತಿ ವರ್ಷವೂ ಬರುವ ಬಾಬಾ ಸಾಹೇಬರ ದಿನಾಚರಣೆಯನ್ನ ಪೈಪೋಟಿಗೆ ಬಿದ್ದ ಹಾಗೆ ಅದ್ದೂರಿಯಾಗಿ ಮಾಡಿದರೆ ಸಾಲದು ಅವರ ಮೌಲ್ಯಗಳನ್ನು ಅರಿತುಕೊಂಡು ಮತ್ತು ಸಂವಿಧಾನದ ಆಶಯದಂತೆ ನಡೆದುಕೊಂಡರೆ ಮಾತ್ರ ಅಂಬೇಡ್ಕರವರ ದಿನಾಚರಣೆಯನ್ನು ಆಚರಿಸಿದಕ್ಕೂ ಸಾರ್ಥಕವಾಗುತ್ತದೆ.
ರೇಣುಕಾ ಹನ್ನುರ್, ಕಲಬುರಗಿ
ಯುವ ಬರಹಗಾರ್ತಿ