Home ರಾಜ್ಯ ಹಾಸನ ಅಧಿವೇಶನದ ಬಳಿಕ ಹಾಸನದಲ್ಲಿ ಮುಖಂಡರು, ಕಾರ್ಯಕರ್ತರ ಸಭೆ: ಎಚ್‌.ಡಿ. ದೇವೇಗೌಡ

ಅಧಿವೇಶನದ ಬಳಿಕ ಹಾಸನದಲ್ಲಿ ಮುಖಂಡರು, ಕಾರ್ಯಕರ್ತರ ಸಭೆ: ಎಚ್‌.ಡಿ. ದೇವೇಗೌಡ


ಹಾಸನ: ದೊಡ್ಡಗೇಣಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಮಾಜಿ ಎಂಎಲ್‌ಸಿ ಪಟೇಲ್ ಶಿವರಾಂ ಅವರ ಹನ್ನೊಂದನೇ ದಿನದ ಆರಾಧನಾ ಮಹೋತ್ಸವದಲ್ಲಿ ಜೆಡಿಎಸ್‌ ಹಿರಿಯ ಮುಖಂಡರು ಮತ್ತು ಕುಟುಂಬ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಚಿವ ಎಚ್‌.ಡಿ. ರೇವಣ್ಣ, ಪಟೇಲ್ ಶಿವರಾಂ ಅವರ ಸೇವೆ ಮತ್ತು ತ್ಯಾಗವನ್ನು ಸ್ಮರಿಸಿದರು. “ಪಟೇಲ್ ಶಿವರಾಂ ನಮ್ಮ ಪಕ್ಷದ ನಿಷ್ಠಾವಂತ ಮುಖಂಡರಲ್ಲೊಬ್ಬರು. ಅವರ ತ್ಯಾಗ ಹಾಗೂ ಕೊಡುಗೆಗಳು ಇಂದಿಗೂ ಮರೆಯಲಾಗದು,” ಎಂದು ದೇವೇಗೌಡರು ಹೇಳಿದರು.


ಸುದ್ದಿಗಾರೊಂದಿಗೆ ಮಾತನಾಡಿದ ದೇವೇಗೌಡರು, “ಲೋಕಸಭಾ ಅಧಿವೇಶನದ ಬಳಿಕ ಹಾಸನಕ್ಕೆ ಬರುತ್ತೇನೆ. ಮೂರು ವಾರಗಳ ಕಾಲ ಇಲ್ಲಿ ಇರುತ್ತೇನೆ ಮತ್ತು ಪಕ್ಷದ ಸಂಘಟನೆಗಾಗಿ ಎಲ್ಲರೊಂದಿಗೆ ಸಭೆ ನಡೆಸುತ್ತೇನೆ,” ಎಂದು ಘೋಷಿಸಿದರು. “ನಮ್ಮ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಪಕ್ಷದ ಮುಂದಿನ ಕಾರ್ಯತಂತ್ರ ರೂಪಿಸುತ್ತೇನೆ” ಎಂದು ಅವರು ಹೇಳಿದರು.

You cannot copy content of this page

Exit mobile version