ಕೇರಳ: ವಿಝಿಂಜಂನಲ್ಲಿ ನಡೆಯುತ್ತಿರುವ ಅದಾನಿ ಬಂದರು ಯೋಜನೆ ವಿರುದ್ಧ ಮೀನುಗಾರರು ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ಪ್ರತಿಭಟನೆ ಮುಂದುವರೆಸಿದ್ದಾರೆ.
ಈ ಕುರಿತು ವರದಿ ಮಾಡಿರುವ ಸುದ್ದಿ-ಸಂಸ್ಥೆ ಎಎನ್ಐ, ಮೀನುಗಾರರು ಪುನರ್ವಸತಿ ಮತ್ತು ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಬಂದರು ನಿರ್ಮಾಣ ಪ್ರಾರಂಭವಾದಾಗ ಕರಾವಳಿಯ ಎಕರೆಗಟ್ಟಲೆ ಭೂಮಿ ನಾಶವಾಗಿದೆ ಎಂದು ಆರೋಪಿಸಿದ್ದು, ಯೋಜನೆಯ ವಿರುದ್ಧ ಪ್ರತಿಭಟನೆ ಮುಂದುವರೆದಿದೆ ಎಂದು ತಿಳಿಸಿದೆ.