Home ದೇಶ 131 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ರೈತ ನಾಯಕ ಜಗಜಿತ್ ಸಿಂಗ್

131 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ರೈತ ನಾಯಕ ಜಗಜಿತ್ ಸಿಂಗ್

0

ಚಂಡೀಗಢ: ಪಂಜಾಬ್ ಮೂಲದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ 131 ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಅವರು ರೈತ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಸಾಧಿಸಲು ಚಳುವಳಿಯನ್ನು ಮುಂದಕ್ಕೆ ಕೊಂಡೊಯ್ಯುವಂತೆ ಒತ್ತಾಯಿಸಿದರು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಕುರಿತು ಕಾನೂನುಬದ್ಧ ಭರವಸೆ ಮತ್ತು ಇತರ ರೈತ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದಿಂದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಗಜಿತ್ ಸಿಂಗ್ ದಲ್ವಾಲ್ ಕಳೆದ ವರ್ಷ ನವೆಂಬರ್ 26ರಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ನಡುವೆ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು.

ಈ ಸಂದರ್ಭದಲ್ಲಿ, ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್‌ನಲ್ಲಿ ಕಿಸಾನ್ ಮಹಾಪಂಚಾಯತ್ತನ್ನು ಆಯೋಜಿಸಲಾಯಿತು. ರೈತರ ಸಭೆಯಲ್ಲಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸುವಂತೆ ಜಗಜಿತ್ ಸಿಂಗ್ ದಲ್ಲೇವಾಲ್‌ ಅವರನ್ನು ಒತ್ತಾಯಿಸಲಾಯಿತು. ಈ ಹಿನ್ನೆಲೆಯಲ್ಲಿ, ಶನಿವಾರ ಆಸ್ಪತ್ರೆಯಿಂದ ಮನೆಗೆ ಮರಳಿದ ಜಗಜಿತ್ ಸಿಂಗ್ ದಲ್ಲೇವಾಲ್‌, ರೈತರ ಕೋರಿಕೆಯ ಮೇರೆಗೆ ಭಾನುವಾರ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದರು.

ಮತ್ತೊಂದೆಡೆ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಕೂಡ ಶನಿವಾರ ಉಪವಾಸ ಸತ್ಯಾಗ್ರಹ ಕೊನೆಗೊಳಿಸುವಂತೆ ಜಗಜಿತ್ ಸಿಂಗ್ ದಲ್ಲೇವಾಲ್‌ ಅವರನ್ನು ಕೇಳಿಕೊಂಡರು. ರೈತರ ಬೇಡಿಕೆಗಳ ಕುರಿತು ಮೇ 4 ರಂದು ಕೇಂದ್ರ ಸರ್ಕಾರ ರೈತ ಸಂಘಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದೆ ಎಂದು ಬಿಟ್ಟು ಭರವಸೆ ನೀಡಿದರು.

ನಿಮ್ಮ ಆರೋಗ್ಯ ಬಹಳ ಮುಖ್ಯ. ನಿಮ್ಮ ಜೀವ ಪಂಜಾಬ್ ಜನರಿಗೆ ಅಮೂಲ್ಯ. ರೈತರು ಮತ್ತು ಕೃಷಿ ಕಾರ್ಮಿಕರ ಹೋರಾಟಕ್ಕೆ ನಿಮ್ಮ ನಾಯಕತ್ವ ಯಾವಾಗಲೂ ಅಗತ್ಯವಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

You cannot copy content of this page

Exit mobile version