Home ಜನ-ಗಣ-ಮನ ಕ್ಯಾಂಪಸ್ ಕನ್ನಡಿ ಚುನಾವಣಾ ಅಭ್ಯರ್ಥಿ ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳಬಾರದು

ಚುನಾವಣಾ ಅಭ್ಯರ್ಥಿ ದುಡ್ಡು ಕೊಟ್ಟು ಮತ ಹಾಕಿಸಿಕೊಳ್ಳಬಾರದು

0

ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ. ಹಲವು ವಿದ್ಯಾರ್ಥಿಗಳಿಗೆ ಮೊದಲ ಮತಚಲಾವಣೆಯ ಸಂಭ್ರಮ, ಕುತೂಹಲವಾದರೆ ಮತ್ತೆ ಕೆಲವರಿಗೆ ಅದೊಂದು ತಮ್ಮ ಕರ್ತವ್ಯದ ಭಾಗ. ಪರಸ್ಪರ ಪ್ರೀತಿ, ಸುಖ ಶಾಂತಿಯನ್ನು ಬಯಸುವುದರ ಮೂಲಕ ಸದೃಢ ದೇಶ ಕಟ್ಟುವಲ್ಲಿ ನಿಮ್ಮ ಒಂದು ಮತ ಅಮೂಲ್ಯವಾದದ್ದು. ಶಾಸನಸಭೆಗೆ ಹೋಗುವ ನಿಮ್ಮ ಪ್ರತಿನಿಧಿ ಹೇಗಿರಬೇಕೆಂಬುದನ್ನು ಈಗಿಂದಲೇ ಯೋಚಿಸಿ. ನಿಮ್ಮ ಅಭಿಪ್ರಾಯವನ್ನು ನಿಮ್ಮ ಕ್ಯಾಂಪಸ್‌ ಪುಟಕ್ಕೆ ಬರೆಯಿರಿ. ಮೊದಲ ಲೇಖನ ಬರೆದಿದ್ದಾರೆ ಎಸ್. ಕೆ ಉಮೇಶ

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಹೇಗಿರಬೇಕೆಂದರೆ ಮೊದಲಿಗೆ ಖುಷಿಖುಷಿಯಾಗಿ ಲವಲವಿಕೆಯಿಂದ, ತಮ್ಮ ಕ್ಷೇತ್ರದ ಎಲ್ಲ ಜನತೆಯೊಂದಿಗೆ ಬೆರೆಯುವಂತಿರಬೇಕು.

ಕೆಲವು ದಿನಗಳಿಂದ ನಮ್ಮಲ್ಲಿ ರಾಜಕೀಯ ಪಕ್ಷಗಳ ಸೇರ್ಪಡೆಯ ಕಾರ್ಯಕ್ರಮಗಳು ತುಂಬಾ ಹೆಚ್ಚೆಚ್ಚು ನಡೆಯುತ್ತಿವೆ. ಇತ್ತೀಚಿಗೆ ಅಂತಹದ್ದೆ ಒಂದು ರಾಜಕೀಯ ಪಕ್ಷ ಸೇರ್ಪಡೆಯ ಕಾರ್ಯಕ್ರಮವನ್ನು ಗಮನಿಸಲು ಗೆಳೆಯರೊಂದಿಗೆ ಸುಮ್ನೇ ಹೋಗಿದ್ದೆ. ಆ ಅಭ್ಯರ್ಥಿಗೂ ಈ ಸಲ ಸೋಲುತ್ತೇನೆಂಬ ದೊಡ್ಡ ಭಯ ಮೇಲ್ನೋಟಕ್ಕೆ ಕಾಡುವಂತಿತ್ತು. ಜೊತೆಗೆ ಅಲ್ಲಿ ನೆರೆದ ಜನರೂ ಸಹ ಆ ವ್ಯಕ್ತಿ ಸೋಲುತ್ತಾನೆ ಎಂದು ಭವಿಷ್ಯವಾಣಿ ಗೊತ್ತಿರುವವರಂತೆ ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಿದ್ದರು. ಮುಖದಲ್ಲಿ ಕಳೆಯಿಲ್ಲದೇ ಸಪ್ಪೆಯಾಗಿದ್ದ ಆ ಅಭ್ಯರ್ಥಿಯನ್ನಂತೂ ನೋಡಲಾಗುತ್ತಿರಲಿಲ್ಲ.

ನನ್ನ ಪ್ರಕಾರ, ಸ್ಪರ್ಧೆಯ ಕಣದಲ್ಲಿರುವ ಅಭ್ಯರ್ಥಿಗಳು ಹೇಗಿರಬೇಕು ಅಂದರೆ

1. ಜನರನ್ನು ಯಾಮಾರಿಸಬಾರದು.

2. ದುಡ್ಡು ಕೊಟ್ಟು ಓಟ್ ಹಾಕಿಸಿಕೊಳ್ಳಬಾರದು.

3. ಎಲೆಕ್ಷನ್ ಗೆದ್ದ ನಂತರ ಜನರನ್ನು ದೂರ ಸರಿಸಬಾರದು.

4. ಎಲೆಕ್ಷನ್ ಗೆ ಮುಂಚೆ ನನಗೆ ಓಟ್ ಮಾಡಿ ನಿಮಗೆ ಮನೆ ಮಾಡಿಸುತ್ತೇನೆ, ಅದು ಮಾಡಿಸುತ್ತೇನೆ ಇದು ಮಾಡಿಸುತ್ತೇನೆಂದು ಸುಳ್ಳು ಹೇಳಿ ಜನರನ್ನು ಮರುಳು ಮಾಡಬಾರದು.

5. ಜನರು ಕೂಡ ದುಡ್ಡಿಗಾಗಿ ತಮ್ಮ ಓಟ್ ಮಾರಿಕೊಳ್ಳಬಾರದು.

ರಾಜಕೀಯ ವ್ಯಕ್ತಿಗಳು ಯಾವುದೋ ರೀತಿಯಲ್ಲಿ ದುಡ್ಡು, ವಸ್ತು ಹಂಚುವಾಗ ಜನರು ಕೂಡ ತಾಮುಂದು ನಾಮುಂದು ಎಂದವರಂತೆ ಮುಗಿಬಿಳುತ್ತಾರೆ. ಎಲ್ಲರೂ ದುಡ್ಡು ತಗೊಳ್ಳುತ್ತಿದ್ದಾರೆ, ನಾವ್ಯಾಕೆ ದುಡ್ಡು ತೊಗೋಬಾರದು ಅಂತ ಮುಂದಾಗುತ್ತಾರೆ. ರಾಜಕಾರಣಿಗಳು ಕೆಲಸ ಇದ್ದಾಗ ಮಾತ್ರ ನಮ್ಮನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ ಎಂದು ಗೊತ್ತಿರೋದರಿಂದ ಅಂತಹ ಸಮಯದಲ್ಲಿ ಅಂತರ ಕಾಪಾಡಿಕೊಳ್ಳಬೇಕಿದೆ.

ಒಟ್ಟಲ್ಲಿ ಹೇಳಬೇಕಾದರೆ ನಾನೇ ಗೆಲ್ಲುವೆನೆಂದು ಸವಾಲು ಮಾಡಲೇಬಾರದು. ಇವರು ಗೆದ್ದು ಶಾಸಕರಾದರೆಂದರೆ, ಶ್ರೀಮಂತರಿಗೆ ಮಾತ್ರ ಅದು-ಇದು ಅವಕಾಶ ಮಾಡಿ ಕೊಡುತ್ತಾರೆ. ಆದರೆ ಬಡವರನ್ನು ಕೇರ್ ಮಾಡಲ್ಲ. ಜನಸಂಖ್ಯಾ ಬಲವಿದ್ದವರು ಯಾವುದಕ್ಕಾದರೂ ಒಂದು ಸಹಿ ಮಾಡಿ ಅಂದರೆ, ತಕ್ಷಣ ಮಾಡಿ ಕೊಡುತ್ತಾರೆ. ಅದೇ ಬಡವರಿಗೆ ಒಂದು ಸಹಿ ಮಾಡಿ ಅಂದ್ರೆ 24 ಗಂಟೆಗಳ ತನಕವೂ  ತಿರುಗಾಡಿಸುತ್ತಿರುತ್ತಾರೆ. ಈ ತರ ಮಾಡುವುದು ತಪ್ಪು ಅಲ್ವಾ!?

MP ಮಗ MPನೇ ಯಾಕೆ ಆಗಬೇಕಾ? MLA ಮಗ MLA ನೇ ಆಗಬೇಕಾ? ಯಾಕೆ ಬಡವರ ಮಕ್ಕಳು MLA ಆಗಬಾರದು? ಬಡವರ ಮಕ್ಕಳು ನಮಗೆ ಟಿಕೆಟ್ ಕೊಡಿ ಅಂತ ರಾಜಕೀಯ ಪಕ್ಷಗಳನ್ನು ಕೇಳಿದ್ರೆ ಕೊಡಲ್ಲ ಅಂತ ಹೇಳುತ್ತಾರೆ. ಪ್ರತಿಯೊಬ್ಬನಿಗೂ ಶಾಸಕನಾಗುವ ಅವಕಾಶವನ್ನು ಕೇಳಲು ಹಕ್ಕಿದೆಯಲ್ವಾ?

ನಾನಿನ್ನೂ ಮತಚಲಾವಣೆಗೆ ಅರ್ಹನಾಗಿಲ್ಲ. ಆದರೂ ಒಂದು ಮಾತು ಹೇಳೋಕೆ ಇಷ್ಟ ಪಡ್ತೀನಿ. ಎಂಎಲ್ಎ ಬರೀ ಶ್ರೀಮಂತರನ್ನೇ ನೋಡುತ್ತಾನೆ ನಮ್ಮಂತ ಬಡ ಜನರನ್ನು ಯಾರು ನೋಡೋದಿಲ್ಲ ಅಂತೀರಿ. ನಿಮ್ಮದೊಂದು ಗುಂಪು ಸೇರಿಸಿ ನೀವು ಹೋಗಿ ಅವರತ್ರ ಕೇಳಬೇಕು- ನಾವು ನಿಮಗೆ ಎಲೆಕ್ಷನ್ ಟೈಮಲ್ಲಿ ಓಟ್ ಹಾಕಿವಿ ಮತ್ತು ಬೇರೆಯವರಿಂದ ಕೂಡ ಹಾಕ್ಸೀವಿ. ನಮ್ಮ  ಸಮಸ್ಯೆಯನ್ನು ಸರಿ ಮಾಡಿ ಕೊಡ್ರಿ ಅಂತ. ನೀವು ದುಡ್ಡು ತಗೊಂಡು ಓಟು ಹಾಕಿ ಅದು ಮಾಡಿಕೊಡಿ ಇದು ಮಾಡಿಕೊಡಿ ಅಂತ ಕೇಳಿದ್ರೆ ಅವರು ನಿಮ್ಮನ್ನು ನಿರ್ಲಕ್ಷಿಸುತ್ತಾರೆ.

ಚುನಾವಣಾ ಅಭ್ಯರ್ಥಿ ಹೇಗಿರಬೇಕೆಂದರೆ ಖುಷಿಯಾಗಿರಬೇಕು. ನಾನು ಸೋಲುತ್ತೇನೆ ಅಂತ ಭಯಪಡಬಾರದು. ಒಳ್ಳೆ ಮನಸ್ಸು, ವ್ಯಕ್ತಿತ್ವ ಇರಬೇಕು. ಜನರ ನಡುವೆ ಬೇಧ-ಭಾವ ಮಾಡಬಾರದು. ಜನರ ಕಷ್ಟಕ್ಕೆ ಸ್ಪಂದಿಸಬೇಕು.  ನುಡಿದಂತೆ ನಡೆಯಬೇಕು. ಬಡ ಜನರ ಮಗನಾಗಿ ಎಲ್ಲ ಸಮಸ್ಯೆಯನ್ನು ನೋಡಿಕೊಳ್ಳಬೇಕು. ಲಂಚ ಮುಟ್ಟಬಾರದು. ಕೋಟಿ ಕೋಟಿ ಕಾಳಧನ ಲೂಟಿ ಹೊಡೆಯಬಾರದು. ಬಡವರ ಮಕ್ಕಳಿಗೆ ಓದೋಕೆ ಸೌಲಭ್ಯ ಮಾಡಿಕೊಳ್ಳಬೇಕು. ಪ್ರತಿಯೊಂದು ಹಳ್ಳಿಗೂ ಗ್ರಂಥಾಲಯ ನಿರ್ಮಿಸಿಕೊಡಬೇಕು.

ಎಸ್. ಕೆ ಉಮೇಶ

ದ್ವಿತೀಯ ಪಿಯುಸಿ ವಿದ್ಯಾರ್ಥಿ, ಧಾರವಾಡ

ಇದನ್ನೂ ಓದಿ-

You cannot copy content of this page

Exit mobile version