ಜಾರ್ಖಂಡ್ ನಲ್ಲಿ ನಕ್ಸಲ್ ನಿಗ್ರಹ ಪಡೆ (ANF) ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಸಿಪಿಐ ಮಾವೋವಾದಿ ಗುಂಪಿನ ಕಮಾಂಡರ್ ಹತನಾಗಿದ್ದಾನೆ. ಮೃತ ಮಾವೋವಾದಿ ನಕ್ಸಲನನ್ನು ಛತ್ತೀಸ್ ಗಢ ಮತ್ತು ಜಾರ್ಖಂಡ್ ರಾಜ್ಯಕ್ಕೆ ಬೇಕಾದ ಪ್ರಮುಖ ನಕ್ಸಲ್ ನಾಯಕ ತುಳಸಿ ಬುಯಿಯಾ ಎಂದು ಗುರುತಿಸಲಾಗಿದೆ.
ಜಾರ್ಖಂಡ್ ನ ಪುಲಾಮು ಜಿಲ್ಲೆಯಲ್ಲಿ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ನಕ್ಸಲರು ಮತ್ತು ಪೊಲೀಸರ ನಡುವೆ ಕಾಳಗ ನಡೆದಿತ್ತು. ಈ ಸಂದರ್ಭದಲ್ಲಿ ನಕ್ಸಲ್ ಕಮಾಂಡರ್ ಹತ್ಯೆ ಆಗಿದೆ.
ಈ ಕಾರ್ಯಾಚಾರಣೆಯಲ್ಲಿ ತಲೆಗೆ 15 ಲಕ್ಷ ಇನಾಮು ಘೋಷಿಸಿದ್ದ ಮತ್ತೋರ್ವ ಮಾವೋವಾದಿ ನಿತೇಶ್ ಯಾದವ್ ಗಾಯಾಗೊಂಡಿದ್ದಾನೆ. ಸೋಮವಾರ ರಾತ್ರಿ ಮೊಹಮ್ಮದ್ ಗಂಜ್ ಹಾಗೂ ಹೈದರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಚುವಾನ್ ನಲ್ಲಿ ಎನ್ ಕೌಂಟರ್ ಕಾರ್ಯಾಚರಣೆ ನಡೆದಿದೆ. ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.