Home ಬೆಂಗಳೂರು ಉಮರ್ ಖಾಲಿದ್ ಬಿಡುಗಡೆಗಾಗಿ ಆಗ್ರಹಿಸಿ ಬೆಂಗಳೂರಿಗರಿಂದ ಇಮೇಲ್ ಅಭಿಯಾನ

ಉಮರ್ ಖಾಲಿದ್ ಬಿಡುಗಡೆಗಾಗಿ ಆಗ್ರಹಿಸಿ ಬೆಂಗಳೂರಿಗರಿಂದ ಇಮೇಲ್ ಅಭಿಯಾನ

0

ರಾಜಕೀಯ ಕಾರ್ಯಕರ್ತ ಉಮರ್ ಖಾಲಿದ್ ಜೈಲುವಾಸದ ನಾಲ್ಕು ವರ್ಷಗಳ ನಂತರ, ದೇಶದಾದ್ಯಂತದ ಕಾರ್ಯಕರ್ತರ ಗುಂಪು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಮತ್ತು ಭಾರತದ ರಾಷ್ಟ್ರಪತಿಗಳನ್ನು ಉದ್ದೇಶಿಸಿ ಇಮೇಲ್ ಅಭಿಯಾನವನ್ನು ಪ್ರಾರಂಭಿಸಿದೆ.

ಅನೇಕ ಬೆಂಗಳೂರಿಗರು ಈ ಇಮೇಲ್‌ಗಳನ್ನು ಕಳುಹಿಸಿದ್ದಾರೆ.

ಖಾಲಿದ್ ಅವರ ಸಕಾಲಿಕ ಬಿಡುಗಡೆಗಾಗಿ ಜಾಮೀನು ಅರ್ಜಿಯ ತುರ್ತು ವಿಚಾರಣೆ, ಖಾಲಿದ್ ವಿರುದ್ಧದ ಆರೋಪಗಳನ್ನು ಮರು ಮೌಲ್ಯಮಾಪನ ಮಾಡುವುದು ಮತ್ತು 2020ರ ದೆಹಲಿ ಗಲಭೆಯ ಘಟನೆಗಳ ಬಗ್ಗೆ ಪಕ್ಷಪಾತವಿಲ್ಲದ ತನಿಖೆ ನಡೆಸುವಂತೆ ಆಗ್ರಹಿಸಿ ಈ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ಯುಎಪಿಎಯಂತಹ ಕಾನೂನುಗಳ ಮರುಮೌಲ್ಯಮಾಪನಕ್ಕೂ ಈ ಅಭಿಯಾನದಲ್ಲಿ ಆಗ್ರಹಿಸಲಾಗಿದೆ.

ಸಂಘಟಕರಲ್ಲಿ ಒಬ್ಬರಾದ, ಥಾಣೆಯ ವಿದ್ಯಾರ್ಥಿ ಕಾರ್ಯಕರ್ತ ಒಸಾಮಾ ರಾವಲ್, “ಯಾವುದೇ ಆಂದೋಲನದಲ್ಲಿ ಜನರನ್ನು ಸಂಘಟಿಸುವುದು ಬಹಳ ಮುಖ್ಯ” ಎಂದು ಹೇಳುತ್ತಾರೆ. ಒಂದು ತಿಂಗಳೊಳಗೆ 1 ಲಕ್ಷ ಇಮೇಲ್‌ಗಳನ್ನು ಕಳುಹಿಸುವ ಗುರಿಯನ್ನು ತಂಡ ಹೊಂದಿದೆ. ಸಿಜೆಐ ಮತ್ತು ರಾಷ್ಟ್ರಪತಿ ಕಚೇರಿಗಳು ಈ ಅಭಿಯಾನಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಯುಎಪಿಎ ಕಾನೂನಿನ ಅಡಿಯಲ್ಲಿ ಖಾಲಿದ್ ಅವರನ್ನು ಸೆಪ್ಟೆಂಬರ್ 13, 2020ರಂದು ಬಂಧಿಸಲಾಯಿತು.

You cannot copy content of this page

Exit mobile version