Home ಬ್ರೇಕಿಂಗ್ ಸುದ್ದಿ ಭವಾನಿ ರೇವಣ್ಣ ಹಾಸನಕ್ಕೆ ರೀ ಎಂಟ್ರಿ ಆರೋಪಿ ಭವಾನಿಯವರಿಗೆ ಭವ್ಯ ಸ್ವಾಗತ 

ಭವಾನಿ ರೇವಣ್ಣ ಹಾಸನಕ್ಕೆ ರೀ ಎಂಟ್ರಿ ಆರೋಪಿ ಭವಾನಿಯವರಿಗೆ ಭವ್ಯ ಸ್ವಾಗತ 

ಹಾಸನ : ಮಾಜಿ ಸಂಸದ ಹಾಗೂ ಭವಾನಿ ರೇವಣ್ಣ ಅವರ ಪುತ್ರ ಪ್ರಜ್ವಲ್​ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣದ ಸಂತ್ರಸ್ತೆಯ ಅಪಹರಣದ ಕೇಸ್​​​ನಲ್ಲಿ ಆರೋಪಿಯಾಗಿರುವ ಭವಾನಿಯವರು ಇಂದು ಬರೋಬ್ಬರಿ 10 ತಿಂಗಳ ಬಳಿಕ ಹಾಸಕ್ಕೆ ರೀ ಎಂಟ್ರಿ ಕೊಟ್ಟರು.

ನ್ಯಾಯಾಲಯವು ಷರತ್ತು ಸಡಿಲಿಕೆ ನೀಡಿದ್ದರಿಂದ ಭವಾನಿ ರೇವಣ್ಣ ಅವರು ಜಿಲ್ಲೆಯ ಹೊಳೆನರಸೀಪುರಕ್ಕೆ ಆಗಮಿಸಲು ಅನುಕೂಲಗಾಗಿದ್ದು, ಪಟಾಕಿ ಸಿಡಿಸಿ ಹೂಮಳೆ ಸುರಿದು ಅವರನ್ನು ಅದ್ದೂರಿಯಾಗಿ ಅಭಿಮಾನಿಗಳು ಸ್ವಾಗತಿಸಿದರು.

ಅಭಿಮಾನಿಗಳ ಶಿಳ್ಳೆ ಚಪ್ಪಾಳೆ ತಟ್ಟಿ, ಆರತಿ ಬೆಳಗಿ ಭವಾನಿಯವರನ್ನು ಬರಮಾಡಿಕೊಂಡರು. ನಾನು ಆರಾಮಾಗಿದ್ದೇನೆ. ನೀವು ಹೇಗಿದ್ದೀರಿ ಎಂದು ಅಭಿಮಾನಿಗಳೊಂದಿಗೆ ಭವಾನಿ ಇದೇ ವೇಳೆ ಸಂತಸದಿಂದ ಮಾತನಾಡಿದರು. ನಾನು ಇಲ್ಲಿಗೆ ಬರುತ್ತಿರುವ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಆದರೂ ಹೆಚ್ಚು ಜನ ನನ್ನನ್ನು ಸ್ವಾಗತಿಸಲು ಬಂದಿದ್ದೀರಿ. ನಿಮ್ಮ ಅಭಿಮಾನವು ನೋಡಿ ನನಗೆ ಅತೀವ ಖುಷಿಯಾಗಿದೆ ಎಂದು ಭವಾನಿ ಭಾವುಕರಾದರು ಎಂದು ತಿಳಿದುಬಂದಿದೆ.

You cannot copy content of this page

Exit mobile version