ಬಳ್ಳಾರಿ : ನಗರದ ಅನಂತಪುರ ರಸ್ತೆಯ ತಾರಾನಾಥ ಆಯುರ್ವೇದ ಮಹಾವಿದ್ಯಾಲಯ ಬಳಿಯಿರುವ ಫೋರ್ಡ್ ಶೋರೂಂ ಮುಂಭಾಗ ಭಾನುವಾರ ಚೈತನ್ಯ ಗ್ರೂಫ್ ಆಫ್ ಏಜನ್ಸೀಸ್ ವತಿಯಿಂದ ರಕ್ತದಾನ ಶಿಬಿರ ಜರುಗಿತು.
ಈ ವೇಳೆ ಶಿಬಿರ ಆಯೋಜಿಸಿದ್ದ ತಂಡದ ಸದಸ್ಯರು ಮಾತಾನಾಡಿ, ಅನಾರೋಗ್ಯ ಸ್ಥಿತಿಯಲ್ಲಿ ತುರ್ತಾಗಿ ರಕ್ತ ಬೇಕಾಗುತ್ತದೆ. ಅಂತಹವರಿಗೆ ನಮ್ಮಿಂದ ಕನಿಷ್ಠವಾದರು ಸಹಾಯವಾಗಲೆಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಅಲ್ಲದೇ ಜಾತಿ ಧರ್ಮಗಳೆಂದು ಬಡಿದಾಡಿಕೊಳ್ಳುತ್ತಾ ಕೋಮು ಸಂಘರ್ಷಗಳಲ್ಲಿ ಇಂದಿನ ಯುವಕರು ಬಲಿಯಾಗುತ್ತಿರುವುದು ದುರಂತ. ಮೊದಲು ಮನುಷ್ಯರಾಗೋಣ, ನಮ್ಮ ರಕ್ತದಲ್ಲಿ ಯಾವ ಜಾತಿ, ಧರ್ಮವಿಲ್ಲ ಎಂದು ಹೇಳಿದರು.
ಬಳಿಕ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹೇಶ್ , ನಾಗರಾಜ್, ಅರುಣ್ ಕುಮಾರ್ , ಮಂಜುನಾಥ.ಎಂ, ಆಶ್ವಜ್. ಎಂ, ಸಾಗರ್ ಮತ್ತಿತರರಿದ್ದರು.
