ತಮಿಳುನಾಡು: ಕೊಯಂಬತ್ತೂರಿನ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿರುವುದು ತಿಳಿದು ಬಂದಿದೆ. ಈ ದಾಲಿಯನ್ನು ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದ ವ್ಯಕ್ತಿಯಿಂದ ಇದನ್ನು ಹಾರಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ.
ಈ ದಾಳಿಯ ನಂತರ ಕೊಯಮತ್ತೂರಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ವ್ಯಾಪಕವಾದ ವಾಹನ ತಪಾಸಣೆಯನ್ನು ಮಾಡಲಾಗುತ್ತಿದೆ. ದಹನಕಾರಿ ವಸ್ತು ತುಂಬಿದ ಬಾಟಲಿಯನ್ನು ಬಿಜೆಪಿ ಕಚೇರಿ ಮೇಲೆ ಎಸೆಯಲಾಗಿದೆ. ಈ ಘಟನೆ ಕುರಿತು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ನಡೆಸುತ್ತಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದರು.
ಇನ್ನು ಈ ದಾಳಿಯನ್ನು PFI ನ ದಾಳಿ ಎಂದು ಆರೋಪಿಸಲಾಗಿತ್ತಿದೆ. ಗುರುವಾರ PFI ನ ಮೇಲೆ NIA ದಾಳಿಯ ನಡುವೆ ಕೊಯಮತ್ತೂರು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿ ಅದಕ್ಕಾಗಿ PFI ಅನ್ನು ಬ್ಯಾನ್ ಮಾಡಬೇಕು ಎಂದು ವತ್ತಾಯಿಸಲಾಗಿದೆ.
ಇದನ್ನೂ ನೋಡಿ: https://www.youtube.com/watch?v=ZdRXyjUEkXg
🔶 ನಿರಂತರ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ