ಹಾಸನ : ಇಂದು ನಗರದಲ್ಲಿ ಮಾದಿಗ ದಂಡೋರ ಜಿಲ್ ಲಾಸಮಿತಿಯ ವತಿಯಿಂದ ಜಿಲ್ಲೆಯಾದ್ಯಂತ ಮಾದಿಗ ದಂಡೋರ ಜಾಗೃತಿ ಜಾಥಾ ಉದ್ಘಟನೆ ಮಾಡಲಾಯಿತು ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಟಿ.ಆರ್ ವಿಜಯ್ ಕುಮಾರ್ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯು ಕಳೆದ 30 ವರ್ಷಗಳಲ್ಲಿ ಹೋರಾಟ ಮಾಡಿದ್ದರ ಫಲವಾಗಿ ರಾಜ್ಯದಲ್ಲಿ ಹೋರಾಟ ಮಾಡಿದ ಅನೇಕ ಹೋರಾಟಗಾರರ ಶ್ರಮದಿಂದಾಗಿ ಅದರ ಪ್ರತಿಫಲವಾಗಿ ದಿನಾಂಕ 01/08/2024 ರಂದು ಸುಪ್ರೀಂ ಕೋರ್ಟ್ ನಲ್ಲಿ ಒಳ ಮೀಸಲಾತಿ ಜಾರಿಯನ್ನು ಆಯಾ ರಾಜ್ಯ ಸರ್ಕಾರಗಳು ಮಾಡಬೇಕು ಎಂದು ರಾಜ್ಯಗಳಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಇದೇ ತಿಂಗಳ 5/5 /2025 ನೇ ಸೋಮವಾರದಿಂದ ಪರಿಶಿಷ್ಟ ಜಾತಿಗಳ ಕಾಲೊನಿಗಳಲ್ಲಿ ದತ್ತಾಂಶದ ಸಮೀಕ್ಷೆಯನ್ನು ನಡೆಸುತ್ತಿದ್ದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗದ ಪ್ರತಿನಿಧಿಗಳು ನಮ್ಮ ಗ್ರಾಮಗಳಿಗೆ ಜಾತಿ ಗಣತಿ ಮತ್ತು ದತ್ತಾಂಶವನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಲು ಬರುತ್ತಿದ್ದಾರೆ.
ಸದರಿ ದತ್ತಾಂಶದ ಮಾಹಿತಿಯೇ ನಾವು ಸರ್ಕಾರದಿಂದ ಒಳ ಮೀಸಲಾತಿ ಪಡೆದು ಸರ್ಕಾರದ ಸವಲತ್ತುಗಳನ್ನು ಪಡೆಯಲು ಊರುಗೋಲಾಗಿದ್ದು ಸಮುದಾಯದ ಬಂಧುಗಳು ಈ ಕೆಳಕಂಡ ಸೂಚನೆಗಳನ್ನು ಪಾಲನೆ ಮಾಡಬೇಕೆಂದು ಸಮುದಾಯದವರಲ್ಲಿ ವಿನಂತಿಸಿದರು. ಜಾತಿ ಗಣತಿಯಲ್ಲಿ ನಮ್ಮ ಜಾತಿಯನ್ನು ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ಬರೆಸದೆ ಮಾದಿಗ – 061 ಎಂದು ಬರೆಸುವುದು. ಮಾದಿಗ ಸಮುದಾಯದ ಕಾಲೋನಿಗಳಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಮ್ ಹಾಗೂ ಒಳ ಮೀಸಲಾತಿ ವರ್ಗೀಕರಣದ ಪಿತಾಮಹ ಡಾ. ಮಂದಕೃಷ್ಣ ಮಾದಿಗ ಇವರುಗಳ ಫೋಟೋಗಳನ್ನು (ಬ್ಯಾನರ್) ಹಾಕಿ ‘ನಾಗಮೋಹನ್ ದಾಸ್ ಆಯೋಗಕ್ಕೆ ಸ್ವಾಗತ’ ಎಂದು ಬರೆದು ನಮ್ಮ ಜಾತಿಯನ್ನು ಮಾದಿಗ ಎಂದೇ ಬರೆದುಕೊಳ್ಳಿ ಎಂದು ಸೂಚಿಸಿರು ಜಾಥಾ ಕಾರ್ಯಕ್ರಮದಲ್ಲಿ ಈ ಮೇಲ್ಕಂಡ ಸೂಚನೆಗಳನ್ನು ಪಾಲಿಸಬೇಕಾಗಿ ವಿನಂತಿಸಲಾಯಿತು ಜಾಥಾ ಉದ್ಘಾಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಟಿ.ಆರ್ ವಿಜಯ್ ಕುಮಾರ್, ಸಿಐಟಿಯು ಧರ್ಮೇಶ್, ಪೃಥ್ವಿ, ಎಂಜಿ , ರವೀಶ್, ಅರವಿಂದ್ ರಮೇಶ್ ಹಾಸನ್, ಅಕ್ಮಲ್ ಜಾವೀದ್ ಇನ್ನಿಒತರು ಉಪಸ್ಥಿತರಿದ್ದರು