Home ಜನ-ಗಣ-ಮನ ಕಲೆ – ಸಾಹಿತ್ಯ ಆ ಮರ ಬಿಟ್ಟ ಕಾಯಿ ನಾನು

ಆ ಮರ ಬಿಟ್ಟ ಕಾಯಿ ನಾನು

0

ಖ್ಯಾತ ಮಲಯಾಳಂ ಕವಿ ಸಚ್ಚಿದಾನಂದ ಪಿಳ್ಳೈ ಅವರ ಮೂಲ ಬರಹದ, ಕನ್ನಡದ ವೈಚಾರಿಕ ಸಾಕ್ಷಿಪ್ರಜ್ಞೆ ಪಿ ಲಂಕೇಶ್ ಅವರ ಅನುವಾದದಲ್ಲಿ

ನನ್ನ ಅಜ್ಜಿಗೆ ಹುಚ್ಚು ಹಿಡಿಯಿತು,
ಅವಳನ್ನು ಮೂಲೆಯಲ್ಲಿ ಮಲಗಿಸಿದರು,
ಅಲೇ ಮುದುಕಿ
ಸತ್ತುಹೋಯಿತು.
ಅವಳ ಮೇಲೆ ಹುಲ್ಲು,
ಮಣ್ಣು ಮುಚ್ಚಿದರು.
ಅಲ್ಲಿಂದ ಒಂದು ಕುಡಿ ಹೊರಟು
ಮರವಾಯಿತು.
ಆ ಮರ ಬಿಟ್ಟ
ಕಾಯಿ ನಾನು.

You cannot copy content of this page

Exit mobile version