ಬೆಂಗಳೂರು : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಲು ಬೊಮ್ಮಾಯಿ ಸರ್ಕಾರ ಕ್ರಮ ವಹಿಸಿಕೊಂಡಿದ್ದು ಹೊಸ ಶಾಲಾ ಕೊಠಡಿಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿದೆ.
ಈ ಕುರಿತು ಟ್ವೀಟ್ ಮಾಡಿದ ರಾಜ್ಯ ಬಿಜೆಪಿ ಘಟಕ ʼಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸಕ್ತ ವರ್ಷದಲ್ಲಿ ನಮ್ಮ ಬೊಮ್ಮಾಯಿ ಸರ್ಕಾರ 2100 ಶಾಲಾ ಕೊಠಡಿ ನಿರ್ಮಿಸಲಿದೆ ಮತ್ತು 2500 ಅಂಗನವಾಡಿ ಕೇಂದ್ರ ತೆರೆಯಲು ಕ್ರಮ ವಹಿಸಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಎಂದರೆ ಕೇವಲ ಬಾಯಿಮಾತಲ್ಲ, ಅದು ನಮ್ಮ ಸಂಕಲ್ಪವೂ ಹೌದುʼ ಎಂದು ಹೇಳಿದೆ.