Home ಬ್ರೇಕಿಂಗ್ ಸುದ್ದಿ ಕರ್ನಾಟಕಕ್ಕೆ ಕೇರಳ ಮುಖ್ಯಮಂತ್ರಿ ಭೇಟಿ: ಬೊಮ್ಮಾಯಿ ಜೊತೆ ಚರ್ಚೆ

ಕರ್ನಾಟಕಕ್ಕೆ ಕೇರಳ ಮುಖ್ಯಮಂತ್ರಿ ಭೇಟಿ: ಬೊಮ್ಮಾಯಿ ಜೊತೆ ಚರ್ಚೆ

0

ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಭಾನುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಗಡಿ ಭಾಗದ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು.

ಸಭೆಯಲ್ಲಿ ಉಭಯ ನಾಯಕರು ಗಡಿ ಪ್ರದೇಶದ  ಅಭಿವೃದ್ಧಿ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ವೇಳೆಯ ಸಂಚಾರಕ್ಕೆ ಸಂಬಂಧಿಸಿದಂತೆ ಮಾತು ಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಈ ಹಿನ್ನಲೆ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲೇಖಿಸಿ ಮಾತನಾಡಿದ ಬೊಮ್ಮಾಯಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದುಹೋಗುವ ಹೆದ್ದಾರಿಯನ್ನು  ರಾತ್ರಿ ವೇಳೆ ಸಂಚಾರಕ್ಕೆ ತೆರೆಯಲು ಸಾಧ್ಯವಿಲ್ಲ ಎಂದು  ಪಿಣರಾಯಿ ವಿಜಯನ್‌ ಅವರಿಗೆ ತಿಳಿಸಿದರು.

ಬೊಮ್ಮಾಯಿ ಮತ್ತು ಪಿಣರಾಯಿ ವಿಜಯನ್‌ ಸಭೆಯಲ್ಲಿ ಚರ್ಚೆ ನಡೆಸುತ್ತಿರುವ ದೃಶ್ಯ

ಈ ವೇಳೆ ಉಭಯ ನಾಯಕರು ಬಾಕಿ ಉಳಿದಿರುವ ಎರಡು ರೈಲ್ವೆ ಯೋಜನೆಗಳು ಮತ್ತು ಇತರ ಕೆಲವು ಹೆದ್ದಾರಿ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

You cannot copy content of this page

Exit mobile version