ಹಾಸನ: ಶ್ರೀ ಆದಿಚುಂಚನಗಿರಿ ಮಠದ ವತಿಯಿಂದಡಿಸೆAಬರ್ 29ರ ಭಾನುವಾರದಂದು ಸಂಜೆ 5ಕ್ಕೆ ರಾಷ್ಟçಕವಿ ಕುವೆಂಪು ಅವರ 120ನೇ ಜಯಂತಿ ಮತ್ತು ಪ್ರಥಮ ಬಾರಿಗೆಇದೇ ಮೊದಲ ಬಾರಿಗೆರಾಜ್ಯಮಟ್ಟದ ಬಿಜಿಎಸ್ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆಎಂದುಜಿಲ್ಲಾಒಕ್ಕಲಿಗರ ಸಂಘದಅಧ್ಯಕ್ಷಜಿ.ಎಲ್. ಮುದ್ದೇಗೌಡ ಮತ್ತುಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಹೆಚ್.ಬಿ.ಮದನಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದಎಂ.ಜಿ. ರಸ್ತೆ ಬಳಿ ಇರುವಶ್ರೀ ಆದಿಚುಂಚನಗಿರಿ ಮಠದಕಲ್ಯಾಣ ಮಂಟಪದಲ್ಲಿರಾಷ್ಟçಕವಿ ಕುವೆಂಪು ಅವರ 120ನೇ ಜಯಂತಿಜೊತೆಯಲ್ಲಿವಿವಿಧಕ್ಷೇತ್ರ ಗಳಲ್ಲಿ ಗಣನೀಯ ಸಾಧನೆ ಮಾಡಿರುವಐವರುಗಣ್ಯರಿಗೆರಾಜ್ಯಮಟ್ಟದ ಬಿಜಿಎಸ್ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.ಡಿ.29 ರಂದು ಸಂಜೆ 5 ಗಂಟೆಗೆನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಕಾರ್ಯಕ್ರಮ ನಡೆಯಲಿದೆಎಂದರು.ನಾಡಿನಡಾ.ಹAಪಾ ಹಿರಿಯ ಸಾಹಿತಿ ನಾಗರಾಜಯ್ಯ (ಸಂಸೋಧನೆ), ಖ್ಯಾತ ವಾಗ್ನಿ ಪ್ರೊ. ಕೃಷ್ಣಗೌಡ(ಕನ್ನಡ ನುಡಿಸೇವೆ), ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (ಸಾಮಾಜಿಕ ಸೇವೆ), ಡಾ.ಟಿ.ಸಿ.ಪೂರ್ಣಿಮಾ (ಸಾಹಿತ್ಯ) ಹಾಗೂ ವಿಜಯಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ (ಪತ್ರಿಕೋದ್ಯಮ) ಇವರನ್ನು ಚೊಚ್ಚಲ ಪ್ರಶಸ್ತಿಗೆ ಜಿಲ್ಲಾಒಕ್ಕಲಿಗರ ಸಂಘದಅಧ್ಯಕ್ಷರು ಹಾಗೂ ಆಯ್ಕೆ ಸಮಿತಿಅಧ್ಯಕ್ಷರಾದ ಜಿ.ಎಲ್.ಮುದ್ದೇಗೌಡರಅಧ್ಯಕ್ಷತೆಯ ಸಮಿತಿಆಯ್ಕೆ ಮಾಡಿದೆಎಂದು ತಿಳಿಸಿದರು.ಈ ಸಂಪ್ರದಾಯಇನ್ನು ಮುಂದೆಪ್ರತಿ ವರ್ಷ ಮುಂದುವರಿಯಲಿದೆ. ಆಯಾಯ ಸಂದರ್ಭಕ್ಕೆಅನುಗುಣವಾಗಿ ಕ್ಷೇತ್ರಗಳ ಸಾಧಕರನ್ನು ಪರಿಗಣಿಸಲಾಗುವುದು. ಪ್ರಶಸ್ತಿ ಜೊತೆ25 ಸಾವಿರ ನಗದು ಹಾಗೂ ಬೆಳ್ಳಿ ಫಲಕ ಒಳ ಗೊಂಡಿರುತ್ತದೆ. ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ, ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಅವರ ನೇತೃತ್ವದಲ್ಲಿ ಸಮಾರಂಭ ನಡೆಯಲಿದೆಎಂದು ಮಾಹಿತಿ ನೀಡಿದರು.
ಆಯ್ಕೆ ಸಮಿತಿ ಕಾರ್ಯದರ್ಶಿ ಡಾ.ಹೆಚ್.ಎಲ್.ಮಲ್ಲೇಶಗೌಡ ಮಾತನಾಡಿ, ಕುವೆಂಪು ಜಯಂತಿ ಅಂಗವಾಗಿ ಹೊಸ ಕೃತಿಗಳನ್ನು ಪ್ರಕಟ ಮಾಡಲು ನಿರ್ಧರಿಸಲಾಗಿತ್ತು. ಆದರೆಗುಣಮಟ್ಟದ ಕೃತಿಗಳು ಬಾರದಕಾರಣ, ರಾಜ್ಯಮಟ್ಟದ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತುಎಂದು ಹೇಳಿದರು.ಈ ಬಾರಿಯ ಕುವೆಂಪುಜಯAತಿಯ ವಿಶೇಷ ಎಂದರೆ, ಈಗ ನಾಡಗೀತೆಯಾಗಿರುವಜೈ ಭಾರತಜನನಿಯತನುಜಾತೆಗೀತೆಯನ್ನು ಕುವೆಂಪು ಅವರು 1924 ರಲ್ಲಿ ರಚಿಸಿದರು. ಆಗ ಕುವೆಂಪು ಅವರುಇನ್ನೂ 20 ವರ್ಷದಚಿರಯುವಕ. ಚಿಕ್ಕ ವಯಸ್ಸಿನಲ್ಲೇ ಅವರುಅಸಾಧಾರಣ ಪ್ರತಿಭೆ, ಅಘಾದವಾದ ಪ್ರಬುದ್ಧತೆಇತ್ತುಎಂಬುದಕ್ಕೆ ಈ ಗೀತೆ ಸಾಕ್ಷಿ. ಅದಕ್ಕೀಗ ಸಾರ್ಥಕ 100 ವರ್ಷತುಂಬಿದೆ. ಆಗ ಕರ್ನಾಟಕರಾಷ್ಟçಗೀತೆಯಾಗಿದ್ದಕವಿತೆಯನ್ನು 1928 ರಲ್ಲಿ ಪರಿಷ್ಕರಣೆ ಮಾಡಿಈಗಿರುವ ನಾಡಗೀತೆಯಾಗಿ ಉಳಿಸಲಾಯಿತು ಎಂದರು. ಈ ಬಗ್ಗೆ ಈಗಿನ ಯುವಕರಲ್ಲಿ ಹೆಚ್ಚು ಹೆಚ್ಚು ಪ್ರಚಾರ ಮಾಡಲಾಗುವುದುಎಂದು ತಿಳಿಸಿದರು. ಜಿ.ಎಲ್.ಮುದ್ದೇಗೌಡರು ಮಾತನಾಡಿ, ಕಾರ್ಯಕ್ರಮಕ್ಕೆಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದಬಿ.ಆರ್. ಬೊಮ್ಮೇಗೌಡ, ಹೆತ್ತೂರು ನಾಗರಾಜ್ಇತರರು ಉಪಸ್ಥಿತರಿದ್ದರು.